ಚಿತ್ರದುರ್ಗ
ನಗರದ ತ.ರಾ.ಸು ರಂಗಮಂದಿರಲ್ಲಿ ಚಿತ್ರದುರ್ಗ ತಾಲ್ಲೂಕು ಸರ್ಕಾರಿ ಶಾಲೆಗಳ ಶಿಕ್ಷಕರ ಸೇವಾ ಸಮಸ್ಯೆಗಳನ್ನು ಬಗೆಹರಿಸಲು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ನಾಗಭೂಷಣ್ ಗುರುಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಥಳದಲ್ಲಿಯೇ ಶಿಕ್ಷಕರ ಸೇವಾ ಸಮಸ್ಯೆಗಳಾದ ನಾಮನಿರ್ದೇಶನ, ಕಾಲಮಿತಿ ಬಡ್ತಿಗಳು, ಇ.ಎಲ್, ಸೇವಾ ಬಡ್ತಿ ಮುಂತಾದವುಗಳನ್ನು ಪರಿಶೀಲಿಸಿ ಸೇವಾ ಪುಸ್ತಕದಲ್ಲಿ ನಮೂದಿಸಲಾಯಿತು. ಶಿಕ್ಷಕರು ಕಛೇರಿಗೆ ವಿನಃ ಕಾರಣ ಅಲೆದಾಡುವುದನ್ನು ತಪ್ಪಿಸಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ಜಾರಿಗೆ ತರಲು ತಿಳಿಸಿದರು. ಇದೇ ಸಂದರ್ಭದಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಪುಲೆ ಜನ್ಮ ದಿನಾಚರಣೆ ಆಚರಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸಿ.ಶಿವಾನಂದ, ಕಾರ್ಯದರ್ಶಿ ಜಿ.ಬಿ.ಮಹಂತೇಶ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಆರ್.ಕೃಷ್ಣಪ್ಪ, ಕಾರ್ಯದರ್ಶಿ ಎಸ್.ಕೆಂಚಪ್ಪ, ಉಪಾಧ್ಯಕ್ಷರಾದ ಶಿವರುದ್ರಪ್ಪ, ಎಂ.ಎಸ್.ಲತಾ, ಖಜಾಂಚಿ, ಎಂ.ಕೆಂಚಪ್ಪ, ನೌಕರರ ಸಂಘದ ಪದಾಧಿಕಾರಿಗಳಾದ ರೇವಣಸಿದ್ದಪ್ಪ, ಚೆನ್ನಕೇಶವ, ಕುಮಾರಸ್ವಾಮಿ, ಸೀತಾರಾಮ, ಗುರುನಾಥ್.ಪಿ.ಜೆ, ಎ.ಮಲ್ಲಿಕಾರ್ಜುನ್, ಚಿದಾನಂದಪ್ಪ, ನೇತ್ರಾವತಿ, ವಾಸಂತಿ, ಅಧಿಕಾರಿಗಳಾದ ಈಶ್ವರಪ್ಪ.ಬಿ.ಆರ್.ಸಿ, ಬಾಬುರೆಡ್ಡಿ, ಸಾಯಿಪ್ರಸಾದ್, ಸಿದ್ದೇಶ್ ಹಾಗೂ ಇತರೆ ಸಿಬ್ಬಂದಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
