ತುರುವೇಕೆರೆ:
ಕ್ಷೇತ್ರದಾದ್ಯಂತ ವಿದ್ಯುತ್ ಸಮಸ್ಯೆ ಇದೆ. ಕ್ಷೇತ್ರಕ್ಕೆ 450 ವಿದ್ಯುತ್ ಪರಿವರ್ತಕಗಳನ್ನು ನೀಡುವ ಭರವಸೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದ್ದಾರೆ.ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿ.ಸಿ ಗಳಿಲ್ಲದೆ ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳು ಒಣಗಿ ಹೋಗುತ್ತಿದೆ. ಈ ಕುರಿತು ತಾವು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಸಮಸ್ಯೆಯನ್ನು ತಿಳಿಸಿದ ಪರಿಣಾಮವಾಗಿ 450 ಟಿಸಿಗಳನ್ನು ಸರಬರಾಜು ಮಾಡಿದ್ದು, ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಬಹುತೇಕ ಬಗೆಹರಿದಂತಾಗುತ್ತದೆ ಎಂದರು.
ತಮ್ಮ ಅವಧಿಯಲ್ಲಿ ಮಂಜೂರು ಮಾಡಲಾಗಿರುವ ಎಲ್ಲಾ ಬಗರ್ ಹುಕುಂ ಜಮೀನುಗಳೂ ಕಾನೂನುಬದ್ಧವಾಗಿದೆ. ವಿನಾಕಾರಣ ಶಾಸಕ ಮಸಾಲಾ ಜಯರಾಮ್ ರವರು ಆರೋಪ ಮಾಡುವುದು ಸರಿಯಲ್ಲ. ಕಾನೂನು ಉಲ್ಲಂಘನೆಯಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಬದಿಗಿಟ್ಟು ಉಳಿದ ರೈತರಿಗೆ ಕೂಡಲೇ ಮಂಜೂರು ಚೀಟಿ ನೀಡಬೇಕು ಎಂದು ಆಗ್ರಹಿಸಿದರು.
ನಾನು ಪಕ್ಷಾಂತರಿಯಲ್ಲ. ಕಳೆದ ಇಪ್ಪತ್ತು ವರ್ಷಗಳಿಂದಲೂ ಜೆಡಿಎಸ್ ನಲ್ಲೇ ಇದ್ದೇನೆ. ನನಗೆ ಸಿಎಂ ರ ಓಲೈಕೆ ಅಗತ್ಯವಿಲ್ಲ. ತಮ್ಮ ಮೇಲೆ ಆರೋಪ ಮಾಡಿರುವ ಶಾಸಕರೇ ಎಲ್ಲಾ ಪಕ್ಷಗಳನ್ನು ನೋಡಿ ಬಂದವರು. ಹಾಗಾಗಿ ಅವರಿಗೆ ಮಾತ್ರ ಪಕ್ಷದ ಮುಖಂಡರ ಓಲೈಕೆ ಅಗತ್ಯವಾಗಿದೆ. ಕುಮಾರಸ್ವಾಮಿಯವರು ಮತ್ತು ಡಿ.ಕೆ.ಶಿವಕುಮಾರ್ರವರು ತಮ್ಮನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದು ಅವರು ಹೇಳಿಕೊಂಡಿರುವುದು ಸಾರ್ವಜನಿಕವಾಗಿ ಚರ್ಚಾ ವಸ್ತುವಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
