ಶ್ರಾವಣ ಮಾಸದ ಎಡೆ ಜಾತ್ರೆ ಕಾರ್ಯಕ್ರಮ

ತುಮಕೂರು:

              ತಾಲ್ಲೂಕಿನ ಹೊನ್ನುಡಿಕೆಯ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಸ್ಥಾನದ ಲಿಂಗೈಕ್ಯ ಸ್ಥಳದಲ್ಲಿ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಮಿತಿ, ಹೊನ್ನುಡಿಕೆ ಇವರಿಂದ ಸೆಪ್ಟೆಂಬರ್ 3 ರ ಸೋಮವಾರ ಶ್ರಾವಣಮಾಸದ ನಾಲ್ಕನೇ ಸೋಮವಾರ ನಡೆಯುವ ಎಡೆ ಜಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

                ಬೆಳಗ್ಗೆ 9 ಗಂಟೆಗೆ ಶ್ರೀ ಗೋಸಲ ಚನ್ನಬಸವೇಶ್ವರ ಗದ್ದುಗೆಗೆ ಕ್ಷೀರಾಭಿಷೇಕ, ದಿವ್ಯ ಸಾನಿಧ್ಯವನ್ನು ಶ್ರೀ ಇಮ್ಮಡಿ ಬಸವರಾಜು ಸ್ವಾಮಿಗಳು, ಜಡದೇವರಮಠ ಇವರು ವಹಿಸುವರು. ಬೆಳಗ್ಗೆ 11 ಗಂಟೆಗೆ ಶ್ರೀಗಳು ನೂತನವಾಗಿ ನಿರ್ಮಿಸಿರುವ ರಥದಲ್ಲಿ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀಬಸವೇಶ್ವರ ಸ್ವಾಮಿ, ಶ್ರೀಗೋಸಲ ಚನ್ನಬಸವೇಶ್ವರಸ್ವಾಮಿ ದೇವಸ್ಥಾನಕ್ಕೆ ವಿಜೃಂಭಿಸುವುದು. ಮಧ್ಯಾಹ್ನ 11.30ಕ್ಕೆ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿಗಳ ಮಹಾ ಸನ್ನಿಧಿಯಲ್ಲಿ ಶ್ರೀ ಚರಮೂರ್ತಿ ಸಚ್ಚಿದಾನಂದ ಮಹಾಸ್ವಾಮಿಗಳು ಇವರ ಪಾದಪೂಜೆ ನಡೆಯಲಿದೆ.ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಿ.ಸಿ.ಗೌರಿಶಂಕರ್, ಮಾಜಿ ಶಾಸಕ ಬಿ.ಸುರೇಶ್‍ಗೌಡ, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಕೆ.ಎಸ್.ಮಂಜುನಾಥ್, ರುದ್ರಮೂರ್ತಿ ಮುಂತಾದವರು ಉಪಸ್ಥಿತರಿರುವರು

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link