ಸಂತ್ರಸ್ಥರಿಗೆ ಟಿ.ಜಿ.ಎಂ.ಸಿ ನರವು

ತುಮಕೂರು

ನಗರದ ಟಿ.ಜಿ.ಎಂ.ಸಿ. ಬ್ಯಾಂಕ್, ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಲಿ., ಶ್ರೀ ಮಹಾಲಕ್ಷ್ಮಿ ಟೆಂಪಲ್ ಟ್ರಸ್ಟ್ ಹಾಗೂ ಸಾರ್ವಜನಿಕರ ವತಿಯಿಂದ ನೀಡಲಾಗಿದ್ದ ಕೊಡಗು ಜಿಲ್ಲೆಯ ನರೆ ಸಂತ್ರಸ್ಥರಿಗೆ 3500 ಉಣ್ಣೆ ಹೊದಿಕೆಗಳನ್ನು ಹೊತ್ತ ವಾಹನಕ್ಕೆ ಅಪರ ಜಿಲ್ಲಾಧಿಕಾರಿ ಸಿ. ಅನಿತಾ ಅವರು ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಟಿಜಿಎಂಸಿ ಬ್ಯಾಂಕ್‍ನ ಅಧ್ಯಕ್ಷ ಎನ್.ಆರ್.ಜಗದೀಶ್, ರೆಡ್‍ಕ್ರಾಸ್ ಸಂಸ್ಥೆಯ ಛೇರ್ಮನ್ ಎಸ್. ನಾಗಣ್ಣ, ಸದಸ್ಯ ಡಾ: ಲಕ್ಷ್ಮಣ್‍ದಾಸ್ ಸೇರಿದಂತೆ ಹಲವರು ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap