ದಾವಣಗೆರೆ :
ನಮ್ಮ ಎಲ್ಲಾ ಶಾಸಕರು ಬಿಗಿಯಾಗಿದ್ದಾರೆ. ಯಾರನ್ನೂ ರೆಸಾರ್ಟ್ಗೆ ಕರೆದೊಯ್ಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಎಲ್ಲಾ ಶಾಸಕರೂ ಬಿಗಿಯಾಗಿದ್ದು, ಯಾರನ್ನೂ ರೆಸಾರ್ಟ್ಗೆ ಕರೆದೊಯ್ಯುವ ಅಗತ್ಯವೇ ಇಲ್ಲ ಎಂದರು.
ನಮ್ಮ ಪಕ್ಷದ ಮೇಲೆ ಯಾವ ಆಪರೇಷನ್, ಗೀಪರೇಷನ್ ಏನೂ ನಡೆಯಲ್ಲ. ಕಾಂಗ್ರೆಸ್ಸಿನ ಯಾವೊಬ್ಬ ಶಾಸಕರೂ ಎದುರಾಳಿಗಳ ಆಮಿಷಗಳಿಗೆ ಒಳಗಾಗುವುದಿಲ್ಲ. ಹೀಗಾಗಿಉ ನಮ್ಮ ಸಮ್ಮಿಶ್ರ ಸರ್ಕಾರವೂ ಸುಭದ್ರವಾಗಿರಲಿದೆ ಎಂದು ಹೇಳಿದರು.ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಐದು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಲಿದ್ದು, ಜಾರಕಿಹೊಳಿ ಸೇರಿದಂತೆ ಯಾರೂ ಪಕ್ಷ ತೊರೆಯುವುದಿಲ್ಲ. ಈ ಬಗ್ಗೆ ಯಾವುದೇ ಅನುಮಾನವೂ ಬೇಡ ಎಂದ ಅವರು, ಕಾಂಗ್ರೆಸ್ಸಿನ ಬಗ್ಗೆ ಎಂ.ಪಿ.ರೇಣುಕಾಚಾರ್ಯ ಟೀಕೆ ಮಾಡಿದ ಮಾತ್ರಕ್ಕೆ ಬೆಲೆ ಕೊಡಬೇಕಾ? ರೇಣುಕಾಚಾರ್ಯನನ್ನು ಆಕೆಯ ಜೊತೆಗೆ ಕಳಿಸಿ ಎಂಬುದಾಗಿ ಮಾಜಿ ನರ್ಸ್ವೊಬ್ಬರ ಹೆಸರನ್ನು ಪ್ರಸ್ತಾಪಿಸದೇ ಲೇವಡಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
