ಸರ್ಕಾರದ ವಿರುದ್ಧ ವಿಕಲಚೇತನರ ಪ್ರತಿಭಟನೆ

ಬೆಂಗಳೂರು:

   ಸರ್ಕಾರದ ವಿರುದ್ಧ ವಿಕಲಚೇತನರು 18-0-2024 ರಂದು ಸೋಮವಾರ ಬೆಳಿಗ್ಗೆ 11.00 ಗಂಟೆಯಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.ಕರ್ನಾಟಕ ರಾಜ್ಯದ ವಿಕಲಚೇತನರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಸರ್ಕಾರಿ ಮನವಿ ಮಾಡುತ್ತಿದ್ದಾರೆ …

   ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಗಿದೆ. ಅದೇ ರೀತಿಯಾಗಿ ಸೌಲಭ್ಯ ಪುರುಷ ವಿಕಲಚೇತನರಿಗೂ ನೀಡಬೇಕು.ಕಾರಣ 2003 ರ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಎಲ್ಲಾ ವಿಕಲಚೇತನರಿಗೂ ಉಚಿತ ಪ್ರಯಾಣ ಕಲ್ಪಿಸಿದ್ದು ನಂತರದಲ್ಲಿ ಸ್ಥಗಿತವಾಗಿರುತ್ತದೆ. ಈಗಿನ ಸರ್ಕಾರದಲ್ಲಿ ಮಹಿಳಾ ವಿಕಲಚೇತನರಿಗೂ ಉಚಿತ ಪ್ರಯಾಣದ ಅವಕಾಶವಿದೆ.

   ರಾಜ್ಯದಲ್ಲಿ 9,49,700 ವಿಕಲಚೇತನರು ಮಾಸಾಶನ ಪಡೆಯುತ್ತಿದ್ದಾರೆ. ಈ ಅನುಕೂಲ ಕರ್ನಾಟಕ ರಾಜ್ಯಾದ್ಯಾಂತ ವಿಕಲಚೇತನರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿತ್ತು. ಕಾಂಗ್ರೆಸ್ ಸರ್ಕಾರ ಈಗ ಸ್ಥಗಿತ ಮಾಡಿ 100 ಕೀ.ಮೀ. ವ್ಯಾಪ್ತಿಗೆ ಆದೇಶ ಮಾಡಿರುತ್ತಾರೆ.ಈ ಆದೇಶವನ್ನು ರದ್ದು ಮಾಡಿ ಪುನ: ಕರ್ನಾಟಕ ರಾಜ್ಯಾದ್ಯಾಂತ ಉಚಿತ ಪ್ರಯಾಣ ಮಾಡಲು ಇದಕ್ಕೆ ಅವಕಾಶ ನೀಡಲು… ಈ ಹಿಂದೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತೇವೆ. ಆದರೆ ನಮ್ಮ ಬೇಡಿಕೆ ಇದುವರೆಗೂ ಈಡೇರಿರುವುದಿಲ್ಲ.

   ಆದ್ದರಿಂದ ಫ್ರಿಡಂ ಪಾರ್ಕ್‌ ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಬೆಂಗಳೂರು ಉತ್ತರ ಮಾಜಿ ಎಂಪಿ ಅಭ್ಯರ್ಥಿ ಪರಸಪ್ಪ ಗಜ್ಜರಿ ಎಚ್ಚರಿಕೆ ಸರ್ಕಾರಕ್ಕೆ ನೀಡಿದ್ದಾರೆ.

Recent Articles

spot_img

Related Stories

Share via
Copy link