ಸಿದ್ದು ಮಾಸ್‍ಲೀಡರ್ : ರೇವಣ್ಣ ಬಣ್ಣನೆ

 ಬೆಂಗಳೂರು:

      ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾಸ್ ಲೀಡರ್ ಎಂದು ವಿಧಾನಪರಿಷತ್ ಶಾಸಕ ಹೆಚ್.ಎಂ.ರೇವಣ್ಣ ಅವರು ಬಣ್ಣಿಸಿದರು.

       ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಮತ್ತೇ ನಾನೇ ಸಿಎಂ ಆಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಮರ್ಥಿನೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಸಿ.ಎಂ. ಆಗುತ್ತೇನೆಂಬ ಹೇಳಿಕೆ ನೀಡಿದ್ದಾರೆ ಅನ್ನೋದು ಮುಖ್ಯವಲ್ಲ, ಯಾವಾಗ ನೀಡಿದ್ದಾರೆ ಅನ್ನೋದು ಮುಖ್ಯ. ಜನರೊಂದಿಗೆ ಮಾತನಾಡುವಾಗ ಈ ಮಾತನ್ನು ಹೇಳಿರಬಹುದು ಎಂದು ಸಿದ್ದು ಪರ ಬ್ಯಾಟಿಂಗ್ ಮಾಡಿದ ಅವರು,  ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಮೈತ್ರಿ ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ತಿಳಿಸಿದರು.

      ಸಿದ್ದರಾಮಯ್ಯ ಅವರೊಬ್ಬ ಮಾಸ್ ಲೀಡರ್. ರಾಷ್ಟ್ರೀಯ ಪಕ್ಷದ ಮುಖಂಡರು. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಹೀಗಿರುವಾಗ ಅವರು ಹೇಗೆ ಏಕಾಂಗಿ ಆಗುತ್ತಾರೆ. ನಾವೆಲ್ಲ ಅವರ ಜೊತೆ ಇದ್ದೇವೆ ಎಂದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap