ತುಮಕೂರು:
ಶ್ರೀ ಮಹಾಗಣಪತಿ, ಸೀತಾ ಲಕ್ಷ್ಮಣ ಹನುಮತ್ ಸಮೇತ ಶ್ರೀ ಪಟ್ಟಾಭಿ ರಾಮಚಂದ್ರಸ್ವಾಮಿ ಹಾಗೂ ಮಹಾಲಕ್ಷ್ಮಿ ಪ್ರತಿಷ್ಠಾಪನಾ ಮತ್ತು ಮಹಾಕುಂಭಾಭಿಷೇಕದ ಅಂಗವಾಗಿ ಸೆ.7 ರಂದು ಪ್ರಾತಃಕಾಲ 5.30 ರಿಂದ 6.15 ಗಂಟೆಯೊಳಗೆ ಶ್ರೀ ಮಹಾಗಣಪತಿ, ಸೀತಾ ಲಕ್ಷ್ಮಣ ಹನುಮತ್ ಸಮೇತ ಶ್ರೀ ಪಟ್ಟಾಭಿ ರಾಮಚಂದ್ರಸ್ವಾಮಿ ಹಾಗೂ ಮಹಾಲಕ್ಷ್ಮಿ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಪ್ರಾಣ ಪ್ರತಿಷ್ಠಾಪನೆ, ಕಲಾನ್ಯಾಸಾದಿಗಳು, ಕಲಾಹೋಮ, ನಿರೀಕ್ಷಣಾ ಮಹಾಪೂರ್ಣಾಹುತಿ ನಡೆಯಲಿದೆ.
ಬೆಳಗ್ಗೆ 9.10 ರಿಂದ 10 ಗಂಟೆಯೊಳಗೆ ನಡೆಯುವ ಕಾರ್ಯಕ್ರಮದ್ಲಲಿ ಹಿರೇಮಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳವರಿಂದ ಮಹಾಕುಂಭಾಭಿಷೇಕ ನೆರವೇರಿಸಲಾಗುವುದು. ಅಂದು ಮಹಾಭಿಷೇಕ, ಕಲಶಾಭಿಷೇಕ, ಮಹೇನಿವೇದನ, ಅಷ್ಠವಧಾನ ಸಏವೆ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಲಿವೆ.