ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಗಡುವನ್ನು ಹೈಕೋರ್ಟ್ ಮತ್ತೆ ಮೂರು ದಿನಗಳ ಗಡುವು ನೀಡಿ ಆದೇಶ ಹೊರಡಿಸಿದೆ.
ನಾಳೆ ಸಂಜೆಯೊಳಗೆ ಬೆಂಗಳೂರು ಗುಂಡಿಮುಕ್ತವಾಗಬೇಕು : ಬಿಬಿಎಂಪಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್
ಇದೇ 24(ಸೋಮವಾರ)ರೊಳಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದೂ ಗುಂಡಿ ಇಲ್ಲದಂತೆ ಮಾಡಬೇಕು’ ಎಂದು ತಾಕೀತು ಮಾಡಿದೆ. ರಸ್ತೆ ಗುಂಡಿಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಬೇಕು, ಯಾವುದೇ ನೆಪ ಹೇಳುವಂತಿಲ್ಲ. ಇದು ನಿಮ್ಮ ಮೂಲ ಕರ್ತವ್ಯ. ಇದನ್ನು ಮಾಡಬೇಕೆಂದು ಪಿಐಎಲ್ ಹಾಕಬೇಕಿಲ್ಲ, ಜನರೂ ನಿಮಗೆ ತಿಳಿಸಬೇಕಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾ.ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ಪೀಠ ಪಾಲಿಕೆ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಸೋಮವಾರ(ಸೆ.24)ಕ್ಕೆ ಮುಂದೂಡಿತು.
‘24ರೊಳಗೆ ಗುಂಡಿಗಳನ್ನು ಪೂರ್ತಿ ಮುಚ್ಚದಿದ್ದರೆ ಗಂಭಿರ ಪರಿಣಾಮ ಎದುರಿಸಲು ಸಜ್ಜಾಗಿ’ ಎಂದೂ ನ್ಯಾಯಪೀಠ ಎಚ್ಚರಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
