ದಾಬಸ್ ಪೇಟೆ :
ಸೋಂಪುರ ಹೋಬಳಿಯ ಸುತ್ತ ಮುತ್ತ ಕೈಗಾರಿಕೆಗಳ ಅಭಿವೃದ್ದಿ ಹಾಗೂ ರಸ್ತೆ ಸಂಪರ್ಕಗಳ ಅಭಿವೃದ್ದಿಯಿಂದ ಭೂಮಿಗೆ ಚಿನ್ನದ ಬೆಲೆ ಬಂದಿದ್ದು ಅದರಂತೆ ಭೂ ಮಾಫೀಯ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾ ಜೋರಾಗಿದ್ದು ಸ್ಮಶಾನವನ್ನೂ ಬಿಡದೆ ಒತ್ತುವರಿಗೆ ಪ್ರಯತ್ನಸಲಾಗುತ್ತಿದೆ.
ಬರಗೇನಹಳ್ಳಿ ಗ್ರಾಮದ ಸ್ಮಶಾನದ ಜಾಗದಲ್ಲಿ ಖಾಸಗಿ ವ್ಯಕ್ತಿಯೋರ್ವ ರಸ್ತೆ ನಿರ್ಮಿಸಿ ಅಕ್ರಮವಾಗಿ ಆಕ್ರಮಿಸಲು ಪ್ರಯತ್ನಿಸಿದವರ ವಿರುದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಪರಿಣಾಮ ನೆಲಮಂಗಲ ತಹಶೀಲ್ದಾರ್ ಅರುಂದತಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಮಶಾನದಲ್ಲಿ ರಸ್ತೆ ನಿರ್ಮಾಣಕ್ಕೆ ಬ್ರೇಕ್ ಹಾಕಿದರು.
ಘಟನೆ ವಿವರ:
ಬರಗೇನಹಳ್ಳಿ ಸರ್ವೇ ನಂ 35 ರಲ್ಲಿ ಹದೀನೇಳು ಗುಂಟೆ ಜಮೀನನ್ನು 2015ರಲ್ಲೇ ಸರ್ಕಾರ ಸ್ಮಶಾನಕ್ಕಾಗಿ ಮೀಸಲಿಡಲಾಗಿದ್ದು ಹಲವಾರು ಜನ ಈಗಾಗಲೇ ಇಲ್ಲಿಯೇ ಅಂತ್ಯ ಸಂಸ್ಕಾರವನ್ನೂ ಮಾಡಿದ್ದು ಎರಡನೇ ಶನಿವಾರ ರಜೆ ಇರುವ ಕಾರಣ ಯಾವುದೇ ಅಧಿಕಾರಿಗಳು ಬರುವುದಿಲ್ಲಾ ಎಂಬ ದುರಾಲೋಚನೆಯಿಂದ ಮಣ್ಣೇ ಗ್ರಾಮ ಪಂಚಾಯ್ತಿ ಸದಸ್ಯ ರ್ರನಪಾಳ್ಯದ ಮಂಜುನಾಥ್ (ಪೈಂಟ್ ಮಂಜು) ಎಂಬುವವರು ಸ್ಮಶಾನವನ್ನು ಅತಿಕ್ರಮಣ ಮಾಡಿ ಗ್ರಾಮದ ಜನರಿಗೆ ಡಿಸಿ ಕಡೆಯಿಂದ ರಸ್ತೆ ನಿರ್ಮಿಸಲು ಅನುಮತಿಯಾಗಿದೆ ಎಂದು ಹೇಳಿ ಜೆಲ್ಲಿ ಕಲ್ಲು ಸುರಿದು ರಸ್ತೆ ನಿರ್ಮಿಸಲು ಮುಂದಾದಾಗ ಗ್ರಾಮಸ್ಥರು ನೆಲಮಂಗಲ ತಹಶೀಲ್ದಾರ್ ಅರುಂದತಿ ಹಾಗು ದಾಬಸ್ ಪೇಟೆ ಪೋಲಿಸ್ ಇನ್ಸ್ ಪೆಕ್ಟರ್ ಡಾ. ಎಂ.ಬಿ ನವೀನ್ ಕುಮಾರ್ ರವರಿಗೆ ಪೋನ್ ಮುಖಾಂತರ ದೂರು ನೀಡಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸ್ಮಶಾನದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿರುವವರಿಗೆ ತರಾಟೆಗೆ ತೆಗೆದುಕೊಂಡು ಮತ್ತೊಮ್ಮೆ ಸರ್ವೇ ಕಾರ್ಯ ನಡೆಸಿ ಸ್ಮಶಾನದ ಜಾಗ ಗುರ್ತಿಸುವವರೆಗೂ ಯಾವುದೇ ಕೆಲಸ ಮಾಡಬಾರದೆಂದು ತಾಕೀತು ನೀಡಿದರು.
ಗ್ರಾಮಸ್ಥ ಬಿ.ಎನ್.ವಸಂತ ಕುಮಾರ ಮಾತನಾಡಿ ನಮ್ಮ ಗ್ರಾಮದಲ್ಲಿ ಅನೇಕ ರೈತರ ಜಮೀನು ಕೆ ಐ ಎ ಡಿ ಬಿ ಗೆ ಸ್ವಾದಿನವಾಗಿದೆ ಆದರೆ ಸುಮಾರು 2 ಎಕರೆಗೆ ಸ್ಮಶಾನಕ್ಕೆ ಅರ್ಜಿ ಹಾಕಿದ್ದು ಆದರೆ ಕೇವಲ ಹದೀನೇಳು ಗುಂಟೆ ಜಮೀನನ್ನು ನೀಡಿದ್ದಾರೆ ಆದರೂ ಭೂಮಾಪಿಯಾದವರೂ ಇಂದು ಅದನ್ನು ಒತ್ತುವರಿ ಮಾಡುತ್ತಿದ್ದಾರೆ ಗ್ರಾಮ ಪಂಚಾಯತಿಯವರು ಕಾಪೌಂಡ್ ಮಾಡಿಲ್ಲಾ ಇದರಿಂದ ಅತಿಕ್ರಮಕ್ಕೆ ಸುಲಭವಾಗಿದೆ ಸರ್ಕಾರದ ಜಮೀನನ್ನು ನಾವು ಗ್ರಾಮಸ್ಥರು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.
ಸೋಂಪುರ ಉಪ ತಹಶೀದ್ದಾರ್ ಬಿ.ಸಿ.ಶಶಿಧರ, ರಾಜಸ್ವ ನೀರಿಕ್ಷಕ ಎಚ್.ಎಂ.ಕುಮಾರಸ್ವಾಮಿ, ಗ್ರಾಮ ಲೆಕ್ಕಿಗ ಚಂದ್ರಶೇಖರ ನಾಯಕ, ಗ್ರಾಮ ಪಂಚಾಯತಿ ಸದಸ್ಯರಾದ ರುದ್ರೇಶ್, ಗ್ರಾಮಸ್ಥರಾದ ರಂಗನಾಥ, ಪ್ರಸನ್ನ ಕುಮಾರ್, ಜಯಣ್ಣ, ಚಂದ್ರ ಶೇಖರ, ಪರಮೇಶ, ಚಂದ್ರಪ್ಪ, ನರಸಿಂಹಮೂರ್ತಿ, ರವಿಕುಮಾರ, ಗೀರೀಶ ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
