ಹುಳಿಯಾರು:
ಹಂದನಕೆರೆ ಮತ್ತು ದೊಡ್ಡಎಣ್ಣೇಗೆರೆ ಮಾರ್ಗದ ರಸ್ತೆಯಲ್ಲಿ ಸೇತುವ ಕಾಮಗಾರಿಯ ಅನುಕೂಲಕ್ಕಾಗಿ ಹಾಲಿ ಈಗ ನಿರ್ಮಿಸಿರುವ ಬದಲಿ ಮಾರ್ಗ ರಸ್ತೆಯ ಬದಲಾಗಿ ರಸ್ತೆಯ ಸಮೀಪದಲ್ಲಿ ಬದಲಿ ರಸ್ತೆ ನಿರ್ಮಿಸುವಂತೆ ಜ್ಞಾನಬಾರತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಅವರು ಮನವಿ ಮಾಡಿದ್ದಾರೆ.
ಹಂದನಕೆರೆಯಿಂದ ದೊಡ್ಡಎಣ್ಣೇಗೆರೆಗೆ ಹೊಗುವ ರಸ್ತೆಯಲ್ಲಿ ಪೊಲೀಸ್ ಸ್ಟೇಷನ್ ಬಳಿ 15 ದಿನಗಳ ಹಿಂದಿನಿಂದಲು ಸೇತುವೆ ಕಾಮಗಾರಿ ಸುಮಾರು ನಡೆಯುತ್ತಿದೆ. ಈ ಕಾಮಗಾರಿಯ ಅನುಕೂಲಕ್ಕಾಗಿ ವಾಹನಗಳು ಸಂಚರಿಸಲು ಬದಲಿ ರಸ್ತೆ ನಿರ್ಮಿಸಿದ್ದಾರೆ. ಆದರೆ ಹಾಲಿ ನಿರ್ಮಿಸಿರುವ ಬದಲಿ ರಸ್ತೆಯಿಂದ ವಾಹನ ಸವಾರರಿಗೆ ಭಾರಿ ತೊಂದರೆ ಉಂಟಾಗಿದೆ.
ಸುಮಾರು 5 ರಿಂದ 6 ಕಿ.ಮೀ ಹೆಚ್ಚು ಅಂತರ ಆಗುವ ಜೊತೆಗೆ ಮಣ್ಣಿನ ಧೂಳು, ಮತ್ತು ಕಲ್ಲು, ಗುಂಡಿಗಳ ಕಿರಿಕಿರಿ ಅನುಭವಿಸಬೇಕಿದೆ. ಅಲ್ಲದೆ ಏಕಕಾಲದಲ್ಲಿ ಎರಡ್ಮೂರು ವಾಹನಗಳು ಬಂದರೆ ಪುನಃ ಹಿಂದಕ್ಕೆ ಹೋಗಿ ಬರಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಹಾಲಿ ಕಾಮಗಾರಿ ನಡೆಯುತ್ತಿರುವ ಸೇತುವೆ ಬಳಿಯೇ ವಾಹನಗಳು ಸಂಚರಿಸಲು ಅನುಕೂಲವಾಗುವಷ್ಟು ಸ್ಥಳವಕಾಶವಿದೆ. ಹಾಗಾಗಿ ಎಂಜಿನಿಯರ್ ಅವರು ಖುದ್ದು ಪರಿಶೀಲಿಸಿ ಸಮಸ್ಯೆ ಪರಿಹರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
