ಹಾಕಿ ಕ್ರೀಡೆಗೆ ಆದ್ಯತೆ ಸಿಗುತ್ತಿಲ್ಲ : ವಿಷಾದ

ಚಿಕ್ಕನಾಯಕನಹಳ್ಳಿ
            ಭಾರತ ಅಭಿವೃದ್ದಿಯತ್ತ ಮುಂದುವರಿಯುತ್ತಿದೆ ಎಂಬ ಮಾತು ಎಲ್ಲಡೆ ಕೇಳಿ ಬರುತ್ತಿದೆ. ಆದರೆ ಕ್ರೀಡಾ ವಲಯದಲ್ಲಿ ಹಿಂದೆ ಬಿದ್ದಿದ್ದು, ಹಾಕಿಯಂತಹ ರಾಷ್ಟ್ರೀಯ ಕ್ರೀಡೆಗೆ ಆದ್ಯತೆ ಸಿಗುತ್ತಿಲ್ಲ ಎಂದು ದೈಹಿಕ ಶಿಕ್ಷಣ ನಿರ್ದೇಶಕರಾದ ಎಸ್.ಜೆ.ಶೈಲೇಂದ್ರಕುಮಾರ್ ವಿಷಾದ ವ್ಯಕ್ತಪಡಿಸಿದರು.
           ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಆಚರಣೆ ಮತ್ತು ಕ್ರೀಡೆ, ಜೀವನ ವಿಷಯ ಕುರಿತಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ರವರ ಹೆಸರಿನಲ್ಲಿ ನಾವು ದೇಶದಾದ್ಯಂತ ಕ್ರೀಡಾ ದಿನಾಚರಣೆ ಮಾಡಲಾಗುತ್ತಿದೆ ಎಂದ ಅವರು, ಆರೋಗ್ಯದ ದೃಷ್ಟಿಯಿಂದ ಆದರೂ ಪ್ರತಿಯೊಬ್ಬರು ದಿನನಿತ್ಯ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಲಹೆ ನೀಡಿದರು.
           ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹೆಚ್.ಕೆ.ಪ್ರಸಾದ್ ಮಾತನಾಡಿ, ರಾಷ್ಟ್ರೀಯ ಕ್ರೀಡಾ ಆಚರಣೆಯ ಮಹತ್ವ ಮತ್ತು ಭಾರತ ದೇಶಕ್ಕಾಗಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್‍ರವರ ಸಾಧನೆಗಳ ಬಗ್ಗೆ ತಿಳಿಸಿದರು.
           ಬುಕ್ಕಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಯೇಸುದಾಸ್ ಮೋಹನ್‍ದಾಸ್ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯಗಳ ಕುರಿತು ಹಾಗೂ ವಿಶೇಷ ಜಾನಪದ ಕಲೆ ಮತ್ತು ಸಂಗೀತದ ಮೂಲಕ ಮಾನವನ ಆರೋಗ್ಯ ಕಾಪಾಡುವ ಕುರಿತು ವಿಶೇಷ ಉಪನ್ಯಾಸ ನೀಡಿದರು.

           ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸಿ.ಜಿ.ಶಿವಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಅಧ್ಯಾಪಕ, ಅಧ್ಯಾಪಕೇತರ ವೃಂದ ಮತ್ತು ವಿದ್ಯಾರ್ಥಿ ವೃಂದ ಹಾಜರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕು.ಲತಾ ಬಿ.ಆರ್. ರವರು ನಿರೂಪಿಸಿ, ಕು.ನಾಗಮಣಿ ವಂದಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link