ಹಿರಿಯೂರಿನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ

ಹಿರಿಯೂರು :

   ಪ್ರತಿ ತಿಂಗಳ ಮೂರನೇ ಬುಧವಾರದಂದು ಆರ್ಥಿಕವಾಗಿ ಹಿಂದುಳಿದ ದುರ್ಬಲ ಜನರಿಗಾಗಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತೇವೆ ಎಂಬುದಾಗಿ ರೆಡ್‍ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್‍ರಾಜ್ ಹೇಳಿದರು.

    ನಗರದ ಥಿಯಾಸಾಫಿಕಲ್ ಸೊಸೈಟಿ ಆವರಣದಲ್ಲಿ ರೋಟರಿ, ರೆಡ್‍ಕ್ರಾಸ್ ಸಂಸ್ಥೆ, ಕೊಂಡ್ಲಳ್ಳಿ ಎಂ.ಆರ್.ಟಿ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಥಿಯಾಸಾಫಿಕಲ್ ಸೊಸೈಟಿ ಅಧ್ಯಕ್ಷರಾದ ಎಲ್.ಆನಂದಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆ ಆಧ್ಯಾತ್ಮಿಕ ಸತ್ಸಂಘಗಳ ಚಿಂತನೆಗಳ ಜೊತೆಗೆ ಸೇವಾಸಂಸ್ಥೆಗಳ ಜೊತೆಗೂಡಿ, ಸಾರ್ವಜನಿಕ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿರುವುದು ನಮ್ಮೆಲ್ಲರಿಗೂ ಸಂತಸವಾಗಿದೆ ಎಂದರು.

     ರೋಟರಿ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ ಮಾತನಾಡಿ, ಸಾರ್ವಜನಿಕರು ಜೀವನದ ಜಂಜಾಟಗಳನ್ನು ಬದಿಗೊತ್ತಿ ಇಂತಹ ಆರೋಗ್ಯ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಗಳ ಸದುಪಯೋಗ ಪಡೆಯುವಂತೆ ಕೋರಿದರು.

     ಮಾತನಾಡಿ, ನನ್ನ ಅವಧಿಯಲ್ಲಿ ಇದೇ ರೀತಿಯಾಗಿ ರೆಡ್‍ಕ್ರಾಸ್ ಜೊತೆಯಾಗಿ ಸೇವೆ ಮಾಡಲು ಮುಂದಾಗುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ರೋಟರಿ ನಿಯೋಜಿತ ಅಧ್ಯಕ್ಷ ಹೆಚ್.ಎಸ್.ಪ್ರಶಾಂತ್, ರೆಡ್‍ಕ್ರಾಸ್‍ಸಂಸ್ಥೆಯ ಎಂ.ಎನ್.ಸೌಭಾಗ್ಯವತೀದೇವರು, ಕೆ.ಎಸ್.ಮಹಾಬಲೇಶ್ವರಶೆಟ್ಟಿ, ಹೆಚ್.ಪಿ.ರವೀಂದ್ರನಾಥ್, ಪಿ.ಆರ್.ಸತೀಶ್‍ಬಾಬು, ದೇವರಾಜ್‍ಮೂರ್ತಿ, ಪರಮೇಶ್ವರಭಟ್, ರಂಗನಾಥಪ್ಪ, ಶಿವಲಿಂಗಪ್ಪ, ತಿಮ್ಮರಾಯಪ್ಪ, ಎಂ.ಆರ್.ಟಿ. ಕಣ್ಣಿನ ಆಸ್ಪತ್ರೆ ನೇತ್ರ ವೈದ್ಯರಾದ ಡಾ||ಕೆ.ನಾಗರಾಜ್ ಸಿಬ್ಬಂದಿಗಳಾದ ವೀರೇಶ್ ನೇತ್ರ ಪರೀಕ್ಷಕರು ಪಂಚಾಕ್ಷರಿ, ಲತಾ, ಇತರರು ಹಾಜರಿದ್ದರು. ಶಿಬಿರದಲ್ಲಿ ಸುಮಾರು 90 ಜನರ ನೇತ್ರ ತಪಾಸಣೆ ನಡೆಸಿದ್ದು, ಅಗತ್ಯ ಇರುವ 20 ಜನರಿಗೆ ನೇತ್ರ ಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link