ಹೊತ್ತಿ ಉರಿದ ಶಾಲಾ ಬಸ್‌, ಅದರೊಳಗೆ ಸುಟ್ಟು ಕರಕಲಾದ ಶವ ಪತ್ತೆ

ಬೆಂಗಳೂರು :

    ಬೆಂಗಳೂರಿನ ಬಾಣಸವಾಡಿಯಲ್ಲಿ  ಒಂದು ಶಾಲಾ ಬಸ್ ತಡರಾತ್ರಿ ಹೊತ್ತಿ ಉರಿದಿದ್ದು, ನಂತರ ಪರಿಶೀಲಿಸಿದಾಗ ಬಸ್‌ನೊಳಗೆ ಸುಟ್ಟು ಕರಕಲಾದ ವ್ಯಕ್ತಿಯ ಶವ  ಪತ್ತೆಯಾಗಿದೆ. ಬೆಂಗಳೂರಿನ ಬಾಣಸವಾಡಿಯಲ್ಲಿ ಕಳೆದ 4 ತಿಂಗಳಿಂದ ಈ ಶಾಲಾ ಬಸ್ಸನ್ನು ಓಡಿಸದೆ ನಿಲ್ಲಿಸಲಾಗಿತ್ತು. ನಿನ್ನೆ ತಡರಾತ್ರಿ ಬಸ್‌ ಹೊತ್ತಿ ಉರಿದಿದೆ. ಅದರೊಳಗೆ ವ್ಯಕ್ತಿಯ ಶವ ಪತ್ತೆಯಾಗಿದೆ. ಕೊಲೆ ಮಾಡಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

    ಯಾರೂ ಉಪಯೋಗಿಸದೆ ನಿಲ್ಲಿಸಿದ್ದ ಈ ಬಸ್ಸು ಪಡ್ಡೆ ಹುಡುಗರ ಅಡ್ಡೆಯಾಗಿತ್ತು. ಅದರೊಳಗೆ ಹುಡುಗರು ಮದ್ಯ ಸೇವನೆ, ಗಾಂಜಾ ಸೇವನೆ ನಡೆಸುತ್ತಿದ್ದರು. ಹೀಗಾಗಿ ಬಸ್‌ನೊಳಗೆ ಎಣ್ಣೆ ಹೊಡೆದು, ವ್ಯಕ್ತಿಯನ್ನು ಕೊಲೆ ಮಾಡಿ ಬಸ್‌ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಬಾಣಸವಾಡಿಯ ಅಗ್ನಿಶಾಮಕ ಕಚೇರಿ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

Recent Articles

spot_img

Related Stories

Share via
Copy link