ಕೊಳಚೆ ಪ್ರದೇಶದ ನಿವಾಸಿಗಳಿಗೆ ವಸತಿ ಸೌಲಭ್ಯ: ಶಾಸಕರ ಭರವಸೆ

ಹರಿಹರ

       ನಗರದ ಭಾರತ ಆಯಿಲ್ ಮಿಲ್ ಕಾಂಪೌಂಡಿನ ಕೊಳಚೆ ಪ್ರದೇಶದ ನಿವಾಸಿಗಳಿಗೆ ಶೀಘ್ರದಲ್ಲಿಯೇ
ಜೀ+2 ಮಾದರಿಯ ವಸತಿ ಸೌಲಭ್ಯವನ್ನು ಕಲ್ಪಿಸುವುದಾಗಿ ಶಾಸಕ ಎಸ್.ರಾಮಪ್ಪ ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದರು.
       ಅವರು ಗುರುವಾರದಂದು ನಗರದ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇಲ್ಲಿನ ನಿವಾಸಿಗಳು ಶಾಸಕರಿಗೆ ನಾವು ಸುಮಾರು 60ವರ್ಷಗಳಿಂದಲೂ ಇಲ್ಲಿಯ ನಿವಾಸಿಗಳಾಗಿದ್ದು, ನಾವು 10*15 ಜಾಗದಲ್ಲಿ ವಾಸಿಸುತ್ತಿದ್ದು, ಉಸಿರು ಕಟ್ಟಿದ ವಾತಾವರಣದಲ್ಲಿ ವಾಸ ಮಾಡುತ್ತಿದ್ದೇವೆ. ನಮ್ಮ ಮನೆಯ ಮುಂಭಾಗದ ರಸ್ತೆಗಳು ಕೇವಲ 3ಅಡಿಗಳು ಮಾತ್ರ ಇದ್ದು, ಒಂದೇ ಮನೆಯಲ್ಲಿ 2-3ಕುಟುಂಬಗಳು ಇರಬೇಕಾದ ಅನಿವಾರ್ಯತೆ ನಮ್ಮಗಳಿಗೆ ಇದೆ. ಆದ್ದರಿಂದ ನಮಗೆ ನಗರದ ಯಾವುದೇ ಭಾಗದಲ್ಲಿ ವಸತಿಗೆ ಅನುವು ಮಾಡಿಕೊಂಡಬೇಕೆಂದು ಮಾಡಿದ ಮನವಿಗೆ ಉತ್ತರಿಸಿದ ಅವರು ಇಲ್ಲಿ ಸಣ್ಣ ಪ್ರಮಾಣದ ಮನೆಗಳಿದ್ದು ಅದರಲ್ಲಿ 3ಅಡಿ ರಸ್ತೆಗೆ ಹೊಗಿರುವುದರಿಂದ ಇಲ್ಲಿನ ನಿವಾಸಿಗಳಿಗೆ ವಸತಿಗೆ ತುಂಬ ತೊಂದರೆಯಾಗಿರುವುದು ನನ್ನ ಗಮನದಲ್ಲಿದ್ದು, ಸದ್ಯದಲ್ಲಿಯೇ ಜಿ+2ಮಾದರಿಯ ವಸತಿ ಸೌಲಭ್ಯವನ್ನು ಮಾಡಿಕೊಡಲಾಗುವುದು ಎಂದು ನಿವಾಸಿಗಳಿಗೆ ಭರವಸೆ ನೀಡಿದರು.


ಅಲ್ಲಿನ ಕೆಲ ನಿವಾಸಿಗಳು ನಮ್ಮಗಳೆಲ್ಲರಿಗೂ ಶೌಚಾಲಯದ ಸಮಸ್ಯೆ ಇದ್ದು, ತಕ್ಷಣಕ್ಕೆ ನಮಗೆ ಶೌಚಾಲಯವನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು. ಅದಕ್ಕೆ ಉತ್ತರಿಸಿದ ಶಾಸಕರು ಜೈಭೀಮನಗರದಲ್ಲಿಯೂ ಸಹ ಶೌಚಾಲಯದ ಸಮಸ್ಯೆಯಿದ್ದು, ತಕ್ಷಣ ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಮತ್ತು ಜೈಭೀಮನಗರ ಬಡಾವಣೆಗಳಲ್ಲಿ ಕ್ರಿಯಾ ಯೋಜನೆಯಲ್ಲಿ ಶೌಚಾಲಯದ ಕಾಮಗಾರಿ ಪ್ರಾರಂಭಿಸಲು ನಗರಸಭೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶಿಸಿದರು.
        ಈಗ ಸಂತೆಯು ಶಿವಮೊಗ್ಗ ರಸ್ತೆಯಲ್ಲಿ ನಡೆಯುತ್ತಿದ್ದು, ಅಲ್ಲಿ ವಾಹನ ಮತ್ತು ಜನದಟ್ಟಣೆ ಹೆಚ್ಚಾಗಿರುವುದರಿಂದ ಅಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಬಂವಿಸುತ್ತಿದ್ದು, ಈ ಸಂತೆಯನ್ನು ಭಾರತ್ ಆಯಿಲ್ ಮಿಲ್ ಕಾಂಪೌಂಡಿನಲ್ಲಿ ಸುಮಾರು ವರ್ಷಗಳ ಹಿಂದೆ ನಡೆಸಲಾಗುತ್ತಿದ್ದ ಸಂತೆಯನ್ನು ಪುನರ್ ಪ್ರಾರಂಭಿಸುವ ಬಗ್ಗೆ ಅಲೋಚನೆ ಇದ್ದು, ಇಲ್ಲಿನ ನಿವಾಸಿಗಳು ಮತ್ತು ಗೋಡೌನ್ ಮಾಲೀಕರು ಒಪ್ಪಿಗೆ ನೀಡಿದರೆ ಊರಿನ ಮಧ್ಯ ಭಾಗದಲ್ಲಿ ಬಸ್ ನಿಲ್ದಾಣ ಸಮೀಪವಿರುವ ಜಾಗದಲ್ಲಿ ಸಂತೆಯನ್ನು ಪ್ರಾರಂಭ ಮಾಡಲಾಗುವುದು. ದಿ|| ಹೆಚ್.ಶಿವಪ್ಪನವರು ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಇಲ್ಲಿನ ಜಾಗವನ್ನು ಹರಾಜು ಮಾಡಿದ್ದರಿಂದ ಇಲ್ಲಿ ಸಂತೆ ನಿಂತು ಹೋಗಿರುತ್ತದೆ ಎಂದು ತಿಳಿಸಿದರು.
          ಜೈಭೀಮನಗರ ಬಡಾವಣೆಗೆ ಭೇಟಿ ನೀಡಿದ ಶಾಸಕರು ಅಲ್ಲಿನ ನಿವಾಸಿಗಳ ಕುಂದು ಕೊರತೆಗಳ ಬಗ್ಗೆ ಆಲಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಿ ಮುಂದಿನ ದಿನಮಾನಗಳಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಶ್ರೀಮತಿ ಎಸ್.ಲಕ್ಷ್ಮೀ, ಅಧ್ಯಕ್ಷರಾದ ಶ್ರೀಮತಿ ಸುಜಾತ ರೇವಣಸಿದ್ದಪ್ಪ, ನಗರಸಭೆ ಸದಸ್ಯರಾದ ಬಿ.ರೇವಣಸಿದ್ದಪ್ಪ, ವಸಂತ್‍ಕುಮಾರ, ರತ್ನಮ್ಮ, ಕಾಂಗ್ರೆಸ್ ಮುಖಂಡ ಅಮರಾವತಿ ರೇವಣಸಿದ್ದಪ್ಪ, ನಗರಸಭೆ ಇಂಜಿನಿಯರ್‍ಗಳಾದ ಮಾಲತೇಶ್, ಮಹೇಶ್ ಕೊಡಬಾಳ್, ನೌಷಾದ್, ಆರೋಗ್ಯ ನೀರಿಕ್ಷಕ ಕೊಡಿಭೀಮರಾಯ್, ಅಲ್ಲಿನ ನಿವಾಸಿಗಳಾದ ಹೆಚ್.ಕೆ.ಮೂರ್ತಿ, ಕೆ.ಹೆಚ್.ಹನುಮಂತ, ರಮೇಶ್‍ಬನ್ನಿಮಟ್ಟಿ, ರೆಹಮಾನ್ ಸಾಬ್, ನೀಲಗಿರಿ ಮುಂತಾದವರು ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link