ಅಪರಿಚಿತ ವಾಹನ ಡಿಕ್ಕಿ: ಇಬ್ಬರ ಸಾವು

ಹುಮನಾಬಾದ್

    ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ತಾಲ್ಲೂಕಿನ ರಾ.ಹೆ 65ರ ಸಿಂಧನಕೇರಾ ಕ್ರಾಸ್ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.ಅಪಘಾತದಲ್ಲಿ ಮೃತಪಟ್ಟವರನ್ನು ಸಿಂಧನಕೇರಾ ಗ್ರಾಮದ ನಿವಾಸಿಗಳಾದ ಕೂಲಿಕಾರ್ಮಿಕರಾದ ಸಂಜೀವಕುಮಾರ ಕಲ್ಲಪ್ಪ ಮೇತ್ರೆ(30) ಸ್ಥಳದಲ್ಲೇ ಮೃತಪಟ್ಟರೇ ಬೈಕ್ ಹಿಂಬದಿ ಸವಾರ ಸುಧಾಕರ ಹಣಮಂತ ಹಾದಿಮನಿ(32) ಚಿಕಿತ್ಸೆ ಫಲಿಸದೇ ಕಲ್ಬುರ್ಗಿಯಲ್ಲಿ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

   ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿನೀಡಿರುವ ಪಿಎಸ್ಐ ಬಸವಲಿಂಗಪ್ಪ ಗೋಡಿಹಾಳ್ ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Recent Articles

spot_img

Related Stories

Share via
Copy link