ಚಳ್ಳಕೆರೆ
ತಾಲ್ಲೂಕಿನ ಹೆಗ್ಗೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ150(ಎ) ಟಿ.ಟಿ ವಾಹನ ಹಿಂಬದಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಶಂಕರಿಬಾಯಿ(65) ಕುಮಾರನಾಯ್ಕ(46) ಶ್ವೇತಾ(38) ಎಂಬುವವರು ಸ್ಥಳದಲ್ಲೇ ಸಾವನಪ್ಪಿದರೆ, ಲಕ್ಷ್ಮಿಬಾಯಿ, ತಿಪ್ಪೇಸ್ವಾಮಿ, ಪುಪ್ಪಾವತಿ, ಪ್ರಶಾಂತ್ ಎಂಬುವವರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಗ್ರಾಮವಾದ ತಾಲ್ಲೂಕಿನ ತಳಕು ಹೋಬಳಿಯ ತಿಮ್ಮಣ್ಣನಹಳ್ಳಿಗೆ ಟಿ.ಟಿ ವಾಹನದಲ್ಲಿ ಬರುತ್ತಿರುವಾಗ ಟಿಪ್ಪರ್ ವಾಹನ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಟಿ.ಟಿ ವಾಹನದಲ್ಲಿ ಒಟ್ಟು ಚಾಲಕ ಸೇರಿದಂತೆ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
