ನವದೆಹಲಿ:
ಪಾಕಿಸ್ಥಾನ ಆರ್ಥಿಕ ದಿವಾಳಿಯಾಗಿರುವುದು ಜಗಜಾಹಿರವಾಗಿರುವ ವಿಷಯ ಆದರೆ ಇದು ಎಷ್ಟರ ಮಟ್ಟಿಗೆ ಎಂದರೆ ಒಪ್ಪೊತ್ತಿನ ಊಟಕ್ಕೂ ಹಾಹಾಕಾರ ಎದುರಾಗಿದ್ದು,ಉಚಿತ ಗೋಧಿ ಹಿಟ್ಟು ಪಡೆದುಕೊಳ್ಳಲು ಜನಸಂದಣಿಯಲ್ಲಿ ಕಾಲ್ತುಳಿತ ಸಂಭವಿಸಿ, ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಬೇಸತ್ತ ಜನರು ಉಚಿತ ಹಿಟ್ಟು ಪಡೆಯಲು ಮುಗಿಬಿದ್ದ ಕಾರಣ, ಕಳೆದ ಕೆಲ ದಿನಗಳಿಂದ ಕಾಲು¤ಳಿತ ಪ್ರಕರಣಗಳು ಸಂಭವಿಸುತ್ತಿದೆ. ಘಟನೆಗಳಲ್ಲಿ ನಾಲ್ವರು ವೃದ್ಧರು ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೂಂದೆಡೆ, ವಾಟ್ಸ್ಆಯಪ್ ಗ್ರೂಪ್ನಲ್ಲಿ ದೈವನಿಂದನೆ ಮಾಡಿರುವ ಪ್ರಕರಣ ಸಂಬಂಧಿಸಿದಂತೆ ಪಾಕಿಸ್ತಾನ ಪೇಶಾವರದಲ್ಲಿ ಭಯೋತ್ಪಾದ ನಿಗ್ರಹ ನ್ಯಾಯಾಲಯವು ಮರ್ದಾನ್ ಪ್ರಾಂತ್ಯದ ನಿವಾಸಿ ಸಯ್ಯದ್ ಮೊಹಮ್ಮದ್ ಸೀಶಾನ್ ಎಂಬಾತನಿಗೆ ಗಲ್ಲು ಶಿಕ್ಷೆ ನೀಡಿದೆ.