ಮಹಾರಾಷ್ಟ್ರ : ರಸ್ತೆ ಅಪಘಾತದಲ್ಲಿ 5 ಯುವಕರ ಸಾವು….!

ದಿಗಾವಾಲಾ:

   ಮಹಾರಾಷ್ಟ್ರದ ದಿಗಾವಾಲಾದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೆಲಂಗಾಣದ ಐವರು ಯುವಕರು ಸಾವನ್ನಪ್ಪಿದ್ದಾರೆ .ಕಳೆದ ಭಾನುವಾರ ನಾರಾಯಣಖೇಡ್‌ನಿಂದ ನಾಲ್ವರು ಮತ್ತು ಕಾಮರೆಡ್ಡಿ ಜಿಲ್ಲೆಯ ಬನ್ಸ್ವಾರಾದಿಂದ ಇಬ್ಬರು ಮುಂಬೈಗೆ ಭೇಟಿ ನೀಡಲು ತೆರಳಿದ್ದರು. ಕಾರಿನ ಸ್ಟೇರಿಂಗ್ ಮೇಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ನಂತರ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾನೆ.

   ಮೃತರಲ್ಲಿ ಮೆಹಬೂಬ್ ಖುರೇಷಿ, ಫಿರೋಜ್ ಖುರೇಷಿ, ರಫೀಕ್ ಖುರೇಷಿ, ಫಿರೋಜ್ ಖುರೇಷಿ ಮತ್ತು ಮಜೀದ್ ಪಟೇಲ್ ಸೇರಿದ್ದಾರೆ. ಸೈಯದ್ ಅಮರ್ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಮರ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಎಲ್ಲಾ ಆರು ಯುವಕರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 

   ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಆರು ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಕೂಡಲೇ ದಿಗವಾಲ್‌ಗೆ ತೆರಳುತ್ತಿದ್ದು ಮೃತದೇಹಗಳನ್ನು ಸ್ವಗ್ರಾಮಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap