53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ : ಎಸ್.ವಿ.ರಾಮಚಂದ್ರ

ಜಗಳೂರು :

       53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿರಿಗೆರೆ ಬೃಹನ್ಮ ಠದ ತರಳಬಾಳು ಜಗದ್ಗುರು ಡಾ.ಶಿವ ಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಒತ್ತಾಯದಿಂದಾಗಿ ಉನ್ನತ ಮಟ್ಟದ ಸಮಿತಿಯ ಅನುಮೋದನೆ ದೊರೆತಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

          ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಕೆರೆಗಳನ್ನು ತುಂಬಿಸುವ ಯೋಜನೆಗೆ ಪ್ರಾಥಮಿಕವಾಗಿ ಕರ್ನಾಟಕ ನೀರಾವರಿ ನಿಗಮ 660 ಕೋಟಿ ರೂ.ಗೆ ಅನುಮೋದನೆ ದೊರೆತಿ ದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಕೆರೆಗಳಿಗೆ ನೀರನ್ನು ತುಂಬಿಸುವ ಈ ಯೋಜನೆಗೆ ರಾಜ್ಯ ಸರ್ಕಾರದ ನೀರಾವರಿ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ಮಂಜೂರಾತಿ ದೊರತಿದ್ದು, ರೈತರ ಕನಸಿನ ಯೋಜನೆ ಜಾರಿಗೆ, ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಯೋಜನೆ ಜಾರಿಗೆ ಕಾರಣೀ ಭೂತರಾದ ಸಿರಿಗೆರೆ ಶ್ರೀಗಳಿಗೆ ಹಾಗೂ ಸರ್ಕಾರಕ್ಕೆ ಜಗಳೂರು ತಾಲ್ಲೂಕಿನ ನಾಗ ರೀಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

         ಯಾವುದೇ ನೀರಾವರಿ ಮೂಲಗಳಿಲ್ಲದ ಈ ಕ್ಷೇತ್ರಕ್ಕೆ ಭದ್ರಾಮೇಲ್ದಂಡೆ ಯೋಜನೆ ಜಾರಿಯಾಗಲಿಲ್ಲ. ರೈತರು ಜನಸಾಮಾ ನ್ಯರು ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೂ ಪರಿ ತಪಿಸುತ್ತಿದ್ದಾರೆ. 53 ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಅಭಿವೃದ್ಧಿಯಾಗಿ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ಅವರು ಹೇಳಿದರು.

        ತುಂಗಭದ್ರ ನದಿ ಯಿಂದ ದೀಟೂರು ಮಾರ್ಗವಾಗಿ ಉಚ್ಚಂಗಿದುರ್ಗ ಗುಡ್ಡ ದವರೆವಿಗೂ ನೀರು ಹರಿಸಿ ಅಲ್ಲಿಂದ ಅರಸಿಕೆರೆ ಹೋಬಳಿಯ ಕೆರೆಗಳು ಹಾಗೂ ಜಗಳೂರು ತಾಲ್ಲೂಕಿನ ಕೆರೆಗಳಿಗೆ ಗುರುತ್ಪಾ ಕರ್ಷಣೆ ಮೂಲಕ ನೀರು ತುಂಬಿಸುವ ಈ ಮಹತ್ವದ ಯೋಜನೆಗೆ ಸರ್ಕಾರ ಡಿಪಿಆರ್ ಮತ್ತು ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ತುರ್ತಾಗಿ ಕಾಮಗಾರಿ ಕೈಗೊಳ್ಳಲು ಶ್ರಮ ವಹಿಸಲಾಗುವುದು. ಈಗಾಗಲೇ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಂದಗತಿಯಲ್ಲಿ ಸಾಗಿದ್ದು, ಈ ಯೋಜನೆಯಲ್ಲಿ ಆಗಿರುವಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು.

           53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಶೀಘ್ರವಾಗಿ ಮಂಜೂರು ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಹಾಗೂ ಸಂಸದರಾದ ಜಿ.ಎಂ.ಸಿದ್ದೇಶ್ವರ್ ಕಾರಣಕರ್ತರಾಗಿದ್ದು, ಅವರಿಗೆ ವೈಯಕ್ತಿಕವಾಗಿ ಅಭಿನಂದನೆಗಳ ನ್ನು ಸಲ್ಲಿಸಿದ ಶಾಸಕರು, ಭದ್ರಾ ಮೇಲ್ದಂಡೆ ಯೋಜನೆ ಇನ್ನು ಸಾಕಾರಗೊಳ್ಳದಿರುವ ಹಿನ್ನೆಲೆಯಲ್ಲಿ ನೀರಾವರಿ ಸಚಿವ ಡಿಕೆಶಿ ಶಿವಕುಮಾರ್ ಅವರ ಬಳಿಗೆ ತಾಲ್ಲೂಕು ಭದ್ರಾ ನೀರಾವರಿ ಹೋರಾಟ ಸಮಿತಿ ಅವರೊಂದಿಗೆ ನಿಯೋಗ ತೆರಳಿ ಗಮನ ಸೆಳೆಯಲಾಗುವುದು. ಬರದ ನಾಡನ್ನು ಹಸಿರು ನಾಡನ್ನಾಗಿ ಮಾಡಲು ಭದ್ರಾ ಯೋಜನೆಯು ಜಾರಿಯಾಗುವುದು ಅತ್ಯವಶ್ತವಾಗಿದೆ ಎಂದರು.

        ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ವಿ.ನಾಗಪ್ಪ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ನಾಗ ರಾಜ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಎಂಎಲ್‍ಎ ತಿಪ್ಪೇಸ್ವಾಮಿ, ಪಾಪಲಿಂಗ, ಬಿಸ್ತುವಳ್ಳಿ ಬಾಬು, ಬಿದರಕೆರೆ ರವಿ, ತಾಲೂಕು ನಾಯಕ ಸಮಾಜದ ಕಾರ್ಯ ದರ್ಶಿ ಸೂರಲಿಂಗಪ್ಪ, ಬಡಯ್ಯ, ಎಸ್ಟಿ ಮೋರ್ಚದ ಅಧ್ಯಕ್ಷ ನಿಜಲಿಂಗಪ್ಪ, ರೈತ ಮೋರ್ಚ ಅಧ್ಯಕ್ಷ ಕಾನನಕಟ್ಟೆ ತಿಪ್ಪೇಸ್ವಾಮಿ, ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link