60 ಕೋಟಿ ಜೀವನಾಂಶ : ಸುದ್ದಿ ತಳ್ಳಿಹಾಕಿದ ಧನಶ್ರೀ ಕುಟುಂಬ

ಮುಂಬೈ: 

   ಭಾರತ ಕ್ರಿಕೆಟ್‌ ತಂಡದ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಮತ್ತು ನಟಿ ಧನಶ್ರೀ ವರ್ಮಾ ನಡುವಿನ 4 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದ್ದು, ಬಾಂದ್ರಾ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದೀಗ ಚಹಲ್‌ ವಿಚ್ಛೇದನ ನೀಡುವ ಸಲುವಾಗಿ ಧನಶ್ರೀಗೆ ಜೀವನಾಂಶವಾಗಿ 60 ಕೋಟಿ ರೂ. ನೀಡಲಿದ್ದಾರೆ ಎಂಬ ಸುದ್ದಿಯನ್ನು ಧನಶ್ರೀ ಕುಟುಂಬ ಮೂಲಗಳು ತಳ್ಳಿಹಾಕಿದೆ. ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ನಾವು ಯಾವುದೇ ಹಣದ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ.

    ‘ಜೀವನಾಂಶದ ಅಂಕಿ ಅಂಶದ ಬಗ್ಗೆ ಹರಡುತ್ತಿರುವ ಸುದ್ದಿ ಸಂಪೂರ್ಣ ಆಧಾರರಹಿತವಾಗಿದೆ. ಇದರಿಂದ ನಾವು ತೀವ್ರವಾಗಿ ಬೇಸರಗೊಂಡಿದ್ದೇವೆ. ನಾವು ಯಾವಿದೇ ಮೊತ್ತವನ್ನು ಕೇಳಿಲ್ಲ. ನಮಗೆ ಯಾವುದೇ ಬೇಡಿಕೆಯಿಲ್ಲ. ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಇಂತಹ ಪರಿಶೀಲಿಸದ ಮಾಹಿತಿಯನ್ನು ಪ್ರಕಟಿಸುವುದು ತೀವ್ರ ಬೇಜವಾಬ್ದಾರಿಯಾಗಿದೆ. ಮಾಧ್ಯಮಗಳು ಸಂಯಮದಿಂದ ವರ್ತಿಸಬೇಕು ಮತ್ತು ತಪ್ಪು ಮಾಹಿತಿಯನ್ನು ಹರಡುವ ಮೊದಲು ಸತ್ಯವನ್ನು ಪರಿಶೀಲಿಸಬೇಕು. ಮತ್ತು ಪ್ರತಿಯೊಬ್ಬರ ಗೌಪ್ಯತೆಗೆ ಗೌರವವನ್ನು ನೀಡಬೇಕು’ ಎಂದು ಧನಶ್ರೀ ಕುಟುಂಬ ಸ್ಪಷ್ಟನೆ ನೀಡಿದೆ.

     ಧನಶ್ರೀ ಪರ ವಕೀಲ ಅದಿತಿ ಮೋಹನ್, ಕೂಡ ತಪ್ಪು ಮಾಹಿತಿ ಹರಡದಂತೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳು ವರದಿ ಮಾಡುವ ಮೊದಲು ಸತ್ಯವನ್ನು ಪರಿಶೀಲಿಸಬೇಕು, ಸಾಕಷ್ಟು ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಸಬೇಕು ಎಂದಿದ್ಧಾರೆ. 

    ಧನಶ್ರೀ ಮತ್ತು ಚಹಲ್‌ 2020ರ ಡಿಸೆಂಬರ್‌ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಲಿಟ್ಟಿದ್ದರು. ಚಹಲ್‌ ಲಾಕ್‌ಡೌನ್‌ ಸಮಯದಲ್ಲಿ ಧನಶ್ರೀ ಅವರಿಂದ ನೃತ್ಯ ಕಲಿಯಲು ಇಚ್ಛಿಸಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಮೂಡಿ ಪ್ರೀತಿ ಶುರುವಾಗಿತ್ತು. ಕಳೆದ 18 ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಈ ಜೋಡಿ ಹೊಂದಾಣಿಕೆಯ ಸಮಸ್ಯೆಯಿಂದ ವಿಚ್ಛೇದನ ಪಡೆದಿದ್ದಾರೆ.

   ಕಳೆದ ವರ್ಷ ಡಿಸೆಂಬರ್‌ ಅಂತ್ಯದಲ್ಲಿ ಈ ಜೋಡಿ ಬೇರೆಯಾಗುತ್ತಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಇಬ್ಬರು ಕೂಡ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದರು. ಅದರಲ್ಲೂ ಚಹಲ್‌ ಪತ್ನಿ ಜತೆಗಿರುವ ಎಲ್ಲ ಫೋಟೊವನ್ನು ಕೂಡ ಡಿಲೀಟ್‌ ಮಾಡಿದ್ದರು. ಕೆಲ ದಿನಗಳ ಹಿಂದೆ ಈ ಜೋಡಿ ಸರಣಿ ರಹಸ್ಯ ಪೋಸ್ಟ್‌ಗಳನ್ನು ಮಾಡುತ್ತಿದ್ದರು.

Recent Articles

spot_img

Related Stories

Share via
Copy link