ಪಂಜಾಬ್:
ಆಮ್ ಆದ್ಮಿ ಪಕ್ಷವು ದೇಶದ ಯಾವುದೇ ಮೂಲೆಯಲ್ಲಿ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಬೇಕಾದರೆ ಸಾಧ್ಯವಾದಷ್ಟು ಜನಸಾಮಾನ್ಯರಿಗೆ, ಸಾಮಾನ್ಯರೊಂದಿಗೆ ಬೆರೆಯುವವರಿಗೆ ಆದ್ಯತೆ ನೀಡುತ್ತದೆ.ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಅಧಿಕಾರಿಗಳು, ಹೋರಾಟಗಾರರಿಗೆ ಟಿಕೆಟ್ ನೀಡುವ ಮೂಲಕ ಗಮನ ಸೆಳೆಯುತ್ತದೆ.
ಪಂಜಾಬ್ನಲ್ಲಿ ಆಪ್ ಸರಕಾರ ರಚಿಸಿದ್ದು, ಅಲ್ಲೂ ಸಹ ಸಾಮಾನ್ಯ ಹಿನ್ನೆಲೆಯುಳ್ಳವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಅವರು ಉತ್ತಮ ನಡೆಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.
ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಸಂಪತ್ತು: 18 ಸರ್ಕಾರಿ ಅಧಿಕಾರಿಗಳ ಕರಾಳ ಮುಖ ಬಿಚ್ಚಿಟ್ಟ ಎಸಿಬಿ
ಇದಕ್ಕೆ ನಿದರ್ಶನ ಎಂಬಂತೆ ಪಂಜಾಬ್ನ ನಭಾ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವ ಗುರುದೇವ್ ಸಿಂಗ್ ದೇವ್ ಮಾನ್ ಅವರು ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಸುಮಾರು 80 ಕಿ.ಮೀ. ಸೈಕಲ್ ಮೇಲೆಯೇ ವಿಧಾನಸೌಧಕ್ಕೆ ತೆರಳಿರುವುದು ಎಲ್ಲರ ಗಮನ ಸೆಳೆದಿದೆ.
ವೃತ್ತಿಯಲ್ಲಿ ನಟ ಹಾಗೂ ಗಾಯಕರಾಗಿರುವ ಮಾನ್ ಅವರು ಮತ್ತೊಂದು ವಿಷಯಕ್ಕೂ ರಾಜ್ಯಾದ್ಯಂತ ಸುದ್ದಿಯಾಗಿದ್ದಾರೆ. ತಾವು ಶಾಸಕರಾದ ಕಾರಣ ಸರಕಾರ ನೀಡುವ ಸಂಬಳವನ್ನು ಸಹ ಅವರು ನಿರಾಕರಿಸಿದ್ದಾರೆ. ತಿಂಗಳಿಗೆ ಕೇವಲ ಒಂದು ರೂಪಾಯಿ ಪಡೆಯುವ ಮೂಲಕ ಜನರ ಸೇವೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ. ಭದ್ರತೆಯನ್ನೂ ನಿರಾಕರಿಸಿರುವ ಅವರು ಸಾಮಾನ್ಯನಂತೆ ಇರಲು ತೀರ್ಮಾನಿಸಿದ್ದಾರೆ.
ಭಾರತಕ್ಕೆ ಮತ್ತೇ ಕಾದಿದೆಯಾ ಕೊರೋನಾ ಕಂಟಕ..! ಈ ಬಗ್ಗೆ ವಿಶ್ವಸಂಸ್ಥೆ ಹೇಳಿದ್ದೇನು..?
ಒಬ್ಬ ಗ್ರಾಪಂ ಅಧ್ಯಕ್ಷ ಸಹ ಐಷಾರಾಮಿ ಜೀವನ ಸಾಗಿಸುವ, ಲಕ್ಷಾಂತರ ರೂ. ದುಡ್ಡು ಮಾಡುವ ಇಂದಿನ ಕಾಲಘಟ್ಟದಲ್ಲಿ ಶಾಸಕರಾಗಿ ಆಯ್ಕೆಯಾದರೂ, ಕೋಟಿ ಕೋಟಿ ದುಡ್ಡು ಹೊಡೆಯಲು ಹೊಂಚು ಹಾಕುವ ಬದಲು ಸಂಬಳವನ್ನೂ ನಿರಾಕರಿಸಿ ಜನರ ಸೇವೆ ಮಾಡುತ್ತೇನೆ ಎನ್ನುವ ಗುರುದೇವ್ ಸಿಂಗ್ ದೇವ್ ಮಾನ್ ಅವರ ನಡೆಯು ಮಾದರಿಯಾಗಿದೆ. ಇಂತಹ ರಾಜಕಾರಣಿಗಳ ಸಂಖ್ಯೆ ಜಾಸ್ತಿಯಾಗಲಿ ಎಂಬುದು ಜನರ ಬಯಕೆಯೂ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
