ಮುಂಬೈ:
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ಮುಂಬೈ ಮನೆಯಲ್ಲಿ ಕಳವಾಗಿರುವ ಅಂಶ ಬೆಳಕಿಗೆ ಬಂದಿದೆ.
ಮುಂಬೈನ ನಿಪೇಲ್ ಸೀ ರೋಡ್ ಗೋಯಲ್ ಮನೆಯಲ್ಲಿ ಕೆಲ ದಿನಗಳ ಹಿಂದೆ ಬೆಳ್ಳಿ ವಸ್ತುಗಳು ಕಳುವಾಗುತ್ತಿದ್ದವು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಗೋಯಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ವಿಷ್ಣುಕುಮಾರ್ ವಿಶ್ವಕರ್ಮ (30) ಬಂಧಿತ ಆರೋಪಿ.
ಗೋಯಲ್ ಅವರ ಮನೆಯಿಂದ 35 ಸಾವಿರ ರೂ. ನಗದು, ಬೆಳ್ಳಿಯ ಸಾಮಗ್ರಿಗಳು, ಮೊಬೈಲ್ ಫೋನ್ ಮತ್ತು ಪ್ರಮುಖ ಮಾಹಿತಿಗಳು ಕಳುವಾಗಿವೆ ಎನ್ನಲಾಗಿದೆ.
ಎಲ್ಲ ಕಳ್ಳತನ ಆರೋಪಗಳನ್ನು ಆತ ನಿರಾಕರಿಸಿದ್ದಾನೆ. ಕಳ್ಳತನ ನಡೆದ ಅವಧಿಯಲ್ಲಿ ತಾನು ಸಂಬಂಧಿಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದೆ ಎನ್ನುವುದು ವಿಶ್ವಕರ್ಮ ನೀಡುವ ಸಮರ್ಥನೆ. ಪೊಲೀಸರು ಆತನಿಂದ 5 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಎರಡು ಮಾತ್ರ ತನ್ನದು; ಉಳಿದ ಮೂರು ಸ್ನೇಹಿತನಿಗೆ ಸೇರಿದ್ದು ಎಂದು ಹೇಳಿಕೊಂಡಿದ್ದಾನೆ.
ವಿಷ್ಣುನನ್ನ ವಿಚಾರಣೆಗೆ ಒಳಪಡಿಸಿದ್ದಾಗ ಕೇವಲ ಬೆಳ್ಳಿ ಅಷ್ಟೆ ಅಲ್ಲದೇ ಗೋಯಲ್ ಕಂಪ್ಯೂಟರ್ನಿಂದ ಕೆಲ ಮುಖ್ಯವಾದ ಸರ್ಕಾರಿ ದಾಖಲಾತಿಗಳನ್ನ ಕದ್ದು ಬೆರೆಯವರಿಗೆ ಇ-ಮೇಲ್ ಮೂಲಕ ಕಳಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಆತನ ಮೊಬೈಲ್ ವಶಕ್ಕೆ ಪಡೆದಿರುವ ಸೈಬರ್ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ