ಸಿಎಂ ರಾಜಕೀಯ ಸಲಹೆಗಾರರಾಗಿ ಪತ್ರಕರ್ತ ಎಂ.ಬಿ.ಮರಮಕಲ್!

ಬೆಂಗಳೂರು:

     ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರವರ ರಾಜಕೀಯ ಸಲಹೆ ಗಾರರಾಗಿ ಹಿರಿಯ ಪತ್ರಕರ್ತ ಎಂ.ಬಿ. ಮರಮಕಲ್‌ ಅವರನ್ನು ನೇಮಕ ಮಾಡಿದ್ದು, ಸಚಿವ ಸಂಪುಟ ದರ್ಜೆ ಸ್ಥಾನ ನೀಡಲಾಗಿದೆ.

     ಈಗಾಗಲೇ ರಾಜಕೀಯ ಕಾರ್ಯದರ್ಶಿ ಸಂಸದೀಯ ಕಾರ್ಯದರ್ಶಿ ಹುದ್ದೆಗಳಿಗೆ ಸಚಿವ ಸ್ಥಾನ ವಂಚಿತರನ್ನು ನೇಮಿಸಿರುವ ಸಿಎಂ ಬಿಎಸ್​​ವೈ ಇದೀಗ ತಮ್ಮ ವಿಶೇಷ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ನಂತರ ತಮ್ಮ ಆಪ್ತರಾದ ಮರಮಕಲ್​ರನ್ನು ನೇಮಿಸಿದ್ದಾರೆ.

      ಸದಾ ಸಿಎಂ ಬಿಎಸ್​ವೈ ಜೊತೆಯಲ್ಲಿಯೇ ಇರುತ್ತಿದ್ದ ಮರಮಕಲ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಅನ್ವಯವಾಗುವಂತೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ನಿರ್ವಹಣೆ ಇಲಾಖೆ ಅಧೀನ ಕಾರ್ಯದರ್ಶಿ ಆರ್.ಎಸ್.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link