ನವದೆಹಲಿ :
2012 ರಲ್ಲಿ ದೆಹಲಿಯ ವೈದ್ಯಕೀಯ ವಿದ್ಯಾರ್ಥಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ವರನ್ನು ಗಲ್ಲಿಗೇರಿಸುವುದು ವಿಳಂಬವಾಗುತ್ತಿರುವುದಕ್ಕೆ ದೆಹಲಿಯ ಸರ್ಕಾರವನ್ನು ಪ್ರಕಾಶ್ ಜಾವ್ಡೆಕರ್ ದೂಷಿಸಿದ್ದಾರೆ.
ದೆಹಲಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳ ಗಲ್ಲಿಗೇರಿಸುವುದು ಈಗ ವಿಳಂಬವಾಗಿದೆ. ಗಲ್ಲಿಗೇರಿಸುವುದು ವಿಳಂಬವಾಗುವುದಕ್ಕೆ ಎಎಪಿ ಕಾರಣವಾಗಿದೆ. ಕಳೆದ 2.5 ವರ್ಷಗಳಲ್ಲಿ ಕ್ಷಮಾಧಾನಕ್ಕೆ ಅರ್ಜಿ ಸಲ್ಲಿಸಿದ್ದಕ್ಕಾಗಿ ದೆಹಲಿ ಸರ್ಕಾರ ಏಕೆ ಅಪರಾಧಿಗಳಿಗೆ ನೋಟಿಸ್ ನೀಡಿಲ್ಲ? ಎಂದು ಶ್ರೀ ಜಾವಡೇಕರ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಅವರಲ್ಲಿ ಒಬ್ಬರು ಸಲ್ಲಿಸಿದ ಕರುಣೆ ಅರ್ಜಿಯ ಕಾರಣ ನಾಲ್ಕು ನಿರ್ಭಯಾ ಪ್ರಕರಣದ ಅಪರಾಧಿಗಳ ಜನವರಿ 22 ರಂದು ಜಾರಿಯಾಗಬೇಕಿರುವ ಮರಣದಂಡನೆ ಜಾರಿ ಮಾಡಲು ಸಾಧ್ಯವಿಲ್ಲಾ ಎಂದು ದೆಹಲಿ ಸರ್ಕಾರ ಬುಧವಾರ ಹೈಕೋರ್ಟ್ಗೆ ತಿಳಿಸಿದೆ. ಆದರೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ನೀಡಿರುವ ಬ್ಲಾಕ್ ವಾರೆಂಟ್ ಅನ್ನು ಬದಿಗಿರಿಸಲು ನ್ಯಾಯಾಲಯ ನಿರಾಕರಿಸಿದ್ದು “ಇದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಹೇಳಿದೆ.
ವಿನಯ್ ಶರ್ಮಾ, ಮುಖೇಶ್ ಕುಮಾರ್, ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಗುಪ್ತಾ ಅವರನ್ನು ಮುಂದಿನ ಬುಧವಾರ ಬೆಳಿಗ್ಗೆ 7 ಗಂಟೆಗೆ ದೆಹಲಿಯ ತಿಹಾರ್ ಜೈಲಿನೊಳಗೆ ಗಲ್ಲಿಗೇರಿಸಲಾಗುವುದು. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಮರಣದಂಡನೆಗೆ ಡೆತ್ ವಾರಂಟ್ಗೆ ಸಹಿ ಹಾಕಿದರು, ಏಳು ವರ್ಷಗಳ ನಂತರ ಯುವ ವೈದ್ಯಕೀಯ ವಿದ್ಯಾರ್ಥಿಯನ್ನು ಚಲಿಸುವ ಬಸ್ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ, ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು.
ಇನ್ನು ಡೆತ್ ವಾರಂಟ್ ಅನ್ನು ಪ್ರಶ್ನಿಸಿ ಅಪರಾಧಿ ಅರ್ಜಿಯನ್ನು ಆಲಿಸಲು ನಿರಾಕರಿಸಿದ ಹೈಕೋರ್ಟ್ ,ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅಪರಾಧಿಗೆ ಸೂಚಿಸಿದೆ.
ಕ್ಷಮಾದಾನದ ಅರ್ಜಿ ತೀರ್ಮಾನವಾಗದ ಹೊರತು ಜನವರಿ 22 ರಂದು ನಾಲ್ವರು ಅಪರಾಧಿಗಳಲ್ಲಿ ಯಾರನ್ನೂ ಗಲ್ಲಿಗೇರಿಸಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/01/javdekar.gif)