ಗೋರಖಪುರ್:
ಉತ್ತರ ಪ್ರದೇಶದ ಗೋರಖಪುರ್ಗೆ ವಲಸಿಗ ಕಾರ್ಮಿಕರನ್ನುಹೊತ್ತು ಹೊರಟ ರೈಲು ಗೋರಖಪುರ್ ತಲುಪದೆ ಇಂದು ಬೆಳಿಗ್ಗೆ ಒರಿಸ್ಸಾದ ರೂರ್ಕೆಲಾ ತಲುಪಿದೆ.
ಮೇ 21ರಂದು ಮುಂಬೈನ ವಾಸೈ ನಿಲ್ದಾಣದಿಂದ ಹೊರಟಿದ್ದ ವಿಶೇಷ ಶ್ರಮಿಕ್ ರೈಲು ಉತ್ತರಪ್ರದೇಶದ ಗೋರಖ್ ಪುರಕ್ಕೆ ಹೋಗಬೇಕಿತ್ತು. ರೈಲಿನ ತುಂಬಾ ಟೆಕೆಟ್ ಖಾತರಿಯಾಗಿದ್ದ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿದ್ದರು. ಮಾರ್ಗಮಧ್ಯೆಯೇ ಪಥ ಬಲದಲಿಸಿದ ರೈಲು ಕಡೆಗೆ ಒರಿಸ್ಸಾದ ರೂರ್ಕೆಲಾ ತಲುಪಿದೆ.
Shramik special train set off to Gorakhpur (UP) from Vasai road (Maharashtra) on 21st May, 2020 reaches Rourkela station in Odisha today morning. Clueless passengers claims that driver has lost the route. No official word from @WesternRly. Can someone help. pic.twitter.com/CcccayFCT0
— Ritvick Bhalekar (@ritvick_ab) May 23, 2020
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಇಲಾಖೆಯ ಅಧಿಕಾರಿಗಳು, ‘ಇದರಲ್ಲಿ ರೈಲು ಚಾಲಕನ ತಪ್ಪಿಲ್ಲ. ರೈಲಿನ ಮಾರ್ಗ ಬದಲಾವಣೆ ಬಗ್ಗೆ ಮೊದಲೇ ನಿರ್ಧರಿಸಲಾಗಿತ್ತು. ಆ ನಿರ್ಧಾರದಂತೆ ಚಾಲಕನಿಗೆ ಪಥ ಬದಲಿಸಿ ಚಲಿಸಲು ಮಾರ್ಗದರ್ಶನ ನೀಡಲಾಗಿದೆ,’ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಯಾವೊಬ್ಬ ಪ್ರಯಾಣಿಕರಿಗೂ ಮಾರ್ಗ ಬದಲಾವಣೆಯ ಮಾಹಿತಿ ಕೊಟ್ಟಿರಲಿಲ್ಲ. ಆದುದರಿಂದ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಈಗ ಒರಿಸ್ಸಾದಲ್ಲಿ ಸಿಲುಕಿಕೊಂಡಿದ್ದಾರೆ.
ಮತ್ತೆ ಗೋರಖಪುರ್ಗೆ ರೈಲು ಯಾವಾಗ ಹೊರಡುವುದೆಂಬುದರ ಕುರಿತೂ ಕಾರ್ಮಿಕರಿಗೆ ಸುಳಿವಿಲ್ಲ. ರೈಲಿನಲ್ಲಿ ನೀರಿನ ಕೊರತೆಯೂ ಇದೆ ಎಂದು ಕೆಲವರು ದೂರುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/05/train.gif)