ತಿರುಪತಿಯಲ್ಲಿ ದಿನಕ್ಕೆ 6000 ಭಕ್ತರಿಗೆ ಮಾತ್ರ ತಿಮ್ಮಪ್ಪನ ದರ್ಶನ..!

ತಿರುಪತಿ:

       ಕೊರೋನಾ ತಡೆಯಲು ಸುಮಾರು 2 ತಿಂಗಳಿಂದ ಹೇರಲಾಗಿದ್ದ ಲಾಕ್​ಡೌನ್​​ ಹಂತ ಹಂತವಾಗಿ ಸಡಿಲಿಕೆ ಮಾಡಿ ನಂತರ ಶ್ರದ್ಧಾಕೇಂದ್ರಗಳೆಂದು ಕರೆಯಲ್ಪಡುವ ದೇವಸ್ಥಾನಗಳನ್ನು ತೆರದಿದ್ದುಉ ದೇಶದ ಪ್ರಮುಖ ದೇವಾಲಯವಾದ ತಿರುಪತಿ ಬಾಲಾಜಿ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದು ಇದಕ್ಕೆ ಅಲ್ಲಿನ ಸರ್ಕಾರ ಕೆಲವು ನಿಬಂದನೆಗಳನ್ನು ವಿಧಿಸಿದೆ .

      ಇನ್ನು ಸುರಕ್ಷತಾ ದೃಷ್ಠಿಯಿಂದ ಒಂದು ದಿನಕ್ಕೆ ಕೇವಲ 6 ಸಾವಿರ ಮಂದಿ ಭಕ್ತರಿಗೆ ಮಾತ್ರ ತಿಮ್ಮಪ್ಪನ ದರ್ಶನಕ್ಕೆ ಈಗಾಗಲೇ ಸಾಲಿನಲ್ಲಿ ನಿಂತಿದ್ಧಾರೆ. ಕೇಂದ್ರದ ಮಾರ್ಗಸೂಚಿಯ ಪ್ರಕಾರ 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ದರ್ಶನಕ್ಕೆ ಅವಕಾಶ ಇಲ್ಲ ಎಂದು ಟಿಡಿಪಿ ಸ್ಪಷ್ಟಪಡಿಸಿದೆ. 

         ದರ್ಶನಕ್ಕಾಗಿ ಈಗಾಗಲೇ ಆನ್​​ಲೈನ್ ಮೂಲಕ 3 ಸಾವಿರ ಜನರಿಗೆ ಟಿಕೆಟ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ 3 ಸಾವಿರ ಟಿಕೆಟ್​ಗಳನ್ನು ತಿರುಪತಿಯ ಅಲಿಪಿರಿ ಕೌಂಟರ್​ನಲ್ಲಿ ಕೊಡಲಾಗುತ್ತಿದೆ.

       ಮೂರು ದಿನಗಳಿಂದ ಟಿಕೆಟ್‌ಗಾಗಿ ತುಂಬಾ ಜನ ಆಗಮಿಸುತ್ತಿದ್ದಾರೆ. ಹೀಗಾಗಿ ಕೇವಲ 11 ಗಂಟೆಯ ಒಳಗೆ ಎಲ್ಲಾ ಟಿಕೆಟ್‌ಗಳೂ ಮಾರಾಟವಾಗುತ್ತಿವೆ. ಬಾಲಾಜಿ ದರ್ಶನಕ್ಕೆ ಈವರೆಗೆ ಜೂನ್.30ರ ವರೆಗಿನ ಎಲ್ಲಾ 9,000 ಟಿಕೆಟ್‌ಗಳು ಮಾರಾಟ ಮಾಡಲಾಗಿದ್ದು, ಜೂನ್.12ರ ನಂತರ ಮತ್ತೆ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link