ಚಾಮರಾಜನಗರ :
ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯ ಹತ್ಯೆಗೈದಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ರಾಘವಪುರ ಗ್ರಾಮದಲ್ಲಿ ನಡೆದಿದೆ.
ನಾಗರಾಜನಾಯ್ಕ (40) ಹತ್ಯೆಗೊಳಗಾದ ವ್ಯಕ್ತಿ. ನಾಗರಾಜ್ ಬೇಗೂರಿನ ತೊಂಡವಾಡಿ ಗ್ರಾಮದ ಪದ್ಮ ಎಂಬಾಕೆಯನ್ನು ವಿವಾಹವಾಗಿದ್ದರು. ಆದರೆ ಆಕೆ ಈ ಮೊದಲೇ ತನ್ನ ಗ್ರಾಮದ ಮಣಿಕಂಠ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆಯ ನಂತರವೂ ಅವರಿಬ್ಬರ ಅಕ್ರಮ ಸಂಬಂಧ ಮುಂದುವರೆದಿತ್ತು ಎನ್ನಲಾಗಿದೆ.
ಸೆಪ್ಟಂಬರ್ 11ರಂದು ಪದ್ಮ ತನ್ನ ಪತಿ ನಾಗರಾಜ್ರೊಂದಿಗೆ ತಾಯಿ ಮನೆಗೆ ಬಂದಿದ್ದರು. ಈ ವೇಳೆ ಆಕೆ ಮತ್ತು ಆಕೆಯ ಪ್ರಿಯಕರ ಮನೆಯ ಹಿಂಬದಿಯ ಜಮೀನಿನಲ್ಲಿ ಮಾತನಾಡುತ್ತಿದ್ದಾಗ ನಾಗರಾಜ್ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆಗ ಪದ್ಮ ಪ್ರಿಯಕರನ ಜೊತೆ ಸೇರಿ ನಾಗರಾಜ್ ಮೇಲೆ ಕಲ್ಲು ಎತ್ತಾಕಿ ಕೊಂದಿದ್ದಾಳೆ. ನಂತರ ಯಾರಿಗೂ ಗೊತ್ತಾಗದಂತೆ ಇಬ್ಬರೂ ಶವವನ್ನು ನಂಜನಗೂಡಿನ ಕಳಲೇ ಗ್ರಾಮದ ಬಳಿ ಕಬಿನಿ ನಾಲೆಗೆ ಎಸೆದು ಬಂದಿದ್ದರು. ನಂತರ ಗಂಡ ಕಾಣೆಯಾಗಿದ್ದಾನೆಂದು ಬೇಗೂರು ಪೊಲೀಸ್ ಠಾಣೆಯಲ್ಲಿ ಪದ್ಮ ದೂರು ನೀಡಿದ್ದಳು.
ಸದ್ಯ, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ತಾನೆ ಕೊಲೆ ಮಾಡಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ.
ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ನಾಗರಾಜ್ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ