ಬೆಂಗಳೂರು
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಒಂದು ವರ್ಷವಾದರೂ ಉಪಚುನಾವಣೆಯಲ್ಲಿ ನೀನೆ ಅಭ್ಯರ್ಥಿ ಎಂದು ಹೇಳಿ ಕಳುಹಿಸುವ ಧೈರ್ಯ ಬಿಜೆಪಿ ನಾಯಕರಿಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರದ ಅಭ್ಯರ್ಥಿ ಕುರಿತಂತೆ ಬಿಜೆಪಿಯಲ್ಲಿನ ಗೊಂದಲಗಳ ಕುರಿತು ಪ್ರಸ್ತಾಪಿಸಿದ ಡಿ.ಕೆ.ಶಿವಕುಮಾರ್ ಅವರು, ನಮ್ಮ ಪಕ್ಷದ ಶಾಸಕರಾಗಿದ್ದ ಮುನಿರತ್ನ ಬಿಜೆಪಿ ಸೇರಿದರು, ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಅವರು ಬಿಜೆಪಿ ಸೇರಿ ಒಂದು ವರ್ಷ ಕಳೆದಿದೆ. ಅವರ ಸರ್ಕಾರ ಬಂದಿದೆ. ಆದರೆ ಮುನಿರತ್ನ ಅವರಿಗೆ ಟಿಕೆಟ್ ಖಚಿತ ಎಂದು ಹೇಳಲು ಅವರಿಂದ ಆಗುತ್ತಿಲ್ಲ. ಆದರೆ ನಮ್ಮಲ್ಲಿ ಬಂದ ರಮೇಶ್ಬಾಬು ಅವರ ಹಿಂದಿನ ಸಾಧನೆ ನೋಡಿ ಎರಡನೆ ಅವಗೆ ಅವರು ಅಭ್ಯರ್ಥಿಯಾಗ ಬೇಕು ಎಂದು ನಾವು ತಕ್ಷಣ ನಿರ್ಧಾರ ಮಾಡಿದ್ದೇವೆ ಎಂದರು.ವಿಧಾನಪರಿಷತ್ ಚುನಾವಣೆ ತಯಾರಿಗಾಗಿ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಮಹತ್ವದ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/unnamed-1.gif)