ಸಂಗೀತ ಮಾಂತ್ರಿಕ ಪರಮಶಿವನ್ ಇನ್ನಿಲ್ಲ !!

ಬೆಂಗಳೂರು :

     ಕನ್ನಡ ರಂಗಭೂಮಿಯ, ಅದರಲ್ಲೂ ವೃತ್ತಿ ರಂಗಭೂಮಿಯ ಧೃವತಾರೆ, ಸಂಗೀತ ಮಾಂತ್ರಿಕ ಪರಮಶಿವನ್
ತೀವ್ರ ಹೃದಯಾಘಾತದಿಂದ ಇಂದು ನಮ್ಮನೆಲ್ಲರನ್ನೂ ಅಗಲಿದ್ದಾರೆ.

      ಪರಮಶಿವನ್ ರವರು ಗುಬ್ಬಿ ಕಂಪನಿಯೊಟ್ಟಿಗೆ ಸುಧೀರ್ಘ ಸೇವೆ ನೀಡಿದ ಸಂಗೀತದ ಮೇಷ್ಟ್ರು. ನೂರಾರು ಹಾಡುಗಳನ್ನು ತಮ್ಮ ಇಳೀ ವಯಸ್ಸನಲ್ಲೂ ನೆನಪಿನ ಶಕ್ತಿಯ ಮೇಲೆ ಹಾಡಿ ರಂಜಿಸುತ್ತಿದ್ದ ಸಂಗೀತ ಮಾಂತ್ರಿಕ.

     ಸಮುದಾಯ ಬೆಂಗಳೂರು ವಿಶೇಷ ಸಂದರ್ಭಕ್ಕಾಗಿ ಗುಬ್ಬಿ ಕಂಪನಿಯ ಕಬೀರ ನಾಟಕವನ್ನು ವೃತ್ತಿ ಶೈಲಿಯಲ್ಲೇ ಮಾಡಿದಾಗ ನಮ್ಮ ಹವ್ಯಾಸಿ ನಟರಿಗೆ ಸಂಗೀತವನ್ನು ಕಲಿಸಿ, ಸ್ವತಃ ತಾವೇ ಬಂದು ಎಲ್ಲ ಪ್ರಯೋಗಗಳಿಗೂ ಸಂಗೀತದ ಸಾರಥ್ಯವನ್ನು ನಿರ್ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link