ಚಿತ್ರದುರ್ಗ:
ಶಿವಯೋಗದಿಂದ ಧನ್ಯತೆ ಲಭಿಸುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಶ್ರೀಗಳು ಶರಣ ಸಂಸ್ಕøತಿ ಉತ್ಸವ-2021ರ ಅಂಗವಾಗಿ ಶ್ರೀಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಹಜ ಶಿವಯೋಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಧನ್ಯತೆ ಎನ್ನುವುದು ಸುಲಭವಾಗಿ ಸಿಗುವುದಿಲ್ಲ. ಚಿಂತನೆ ಕೇಳಬೇಕು, ಶಿವಯೋಗ ಎಂಬ ಪರಿಣಾಮಕಾರಿ ಮಾರ್ಗ ಅನುಸರಿಸುವುದರಿಂದ ಧನ್ಯತೆ ಲಭಿಸುತ್ತದೆ. ಧ್ಯಾನಮುಖಿ ಶಿವಯೋಗಮುಖಿಯಾದಾಗ ಧನ್ಯತೆ ಲಭಿಸುತ್ತದೆ. ಧನ್ಯತೆ ಇಲ್ಲದ ಬದುಕು ನಿರರ್ಥಕ. ತಾವೆಲ್ಲ ಸಹಜ ಶಿವಯೋಗದಲ್ಲಿ ಪಾಲ್ಗೊಂಡು ಧನ್ಯತೆಯನ್ನು ಪಡೆದಿದ್ದೀರಿ. ಶಿವಯೋಗ ನಿಮ್ಮ ಬದುಕಿನ ಅವಿಭಾಜ್ಯ ಆಂಗವಾಗಬೇಕು. ನೀರು, ಗಾಳಿ, ಪ್ರಸಾದ ಸ್ವೀಕರಿಸಿದಂತೆ ಶಿವಯೋಗವನ್ನು ಸ್ವೀಕರಿಸಬೇಕು. ಇದರಿಂದ ಪರಮಾನಂದ ಸಿಗುತ್ತದೆ. ಶಿವಯೋಗ ಶರೀರ ಮತ್ತು ಇಂದ್ರಿಯ ಬುದ್ಧಿಗಳ ನಡುವೆ ಸಂಬಂಧ ಏರ್ಪಡಿಸುತ್ತದೆ ಎಂದರು.
ಇಮೇಜ್ನಿಂದಾಗಿ ಏಜ್ಗೆ(ವಯಸ್ಸಿಗೆ) ಬೆಲೆ ಸಿಗುತ್ತದೆ. ನೀವುಗಳು ನಿಮ್ಮ ಇಮೇಜ್ನ್ನು ಹೆಚ್ಚಿಸಿಕೊಳ್ಳುತ್ತಾ ಬರಬೇಕು ಇದರಿಂದ ಬೆಲೆ ಸಿಗುತ್ತದೆ. ಯಾರು ಸಮಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೋ ಸಮಾಜ ಅಂತವರಿಗೆ ಬೆಲೆ ಕೊಡುತ್ತದೆ. ಈ ಸಮಯವನ್ನು ಹೊಸ ವಿಚಾರ, ಅನುಭವ, ಸಾಧನೆ ಮಾಡಲು ಬಳಸಿಕೊಳ್ಳಬೇಕು. ನಿಮ್ಮ ಇಂದ್ರಿಯಗಳ ಶಕ್ತಿಯನ್ನು ಅರ್ಥ ಮಾಡಿಕೊಳ್ಳಿ. ಈ ಶಕ್ತಿಯನ್ನು ಒಗ್ಗೂಡಿಸಿಕೊಂಡು ಸಾಧನೆ ಮಾಡಲು ಬಳಸಿದರೆ ಕಾರ್ಯ ಸಮಗ್ರವಾಗಿ ನಡೆಯುತ್ತದೆ. ಇಂತಹ ಶಕ್ತಿಯನ್ನು ಶಿವಯೋಗದ ಮೂಲಕ ಹೆಚ್ಚಿಸಿಕೊಂಡು ಹೋಗಬೇಕು.
ಪಂಚಾಗ ಪ್ರಜ್ಞೆಗಿಂತ ಪಂಚೇದ್ರಿಯ ಪ್ರಜ್ಞೆ ಶ್ರೇಷ್ಠ, ಸರ್ವಜೀವಿಗಳ ಸಂಕಷ್ಟ ನಿವಾರಣೆಯಾಗಿ ಎಲ್ಲರ ಬದುಕಿನಲ್ಲಿ ಸುಖಶಾಂತಿ ನೆಲಸಲಿ, ಬಸವಣ್ಣನವರ ತತ್ತ್ವಗಳನ್ನು ಎಲ್ಲರೂ ಅನುಸರಿಸುವುದಾದರರೆ ವಿಶ್ವಕ್ಕೆ ಭಾರತ ವಿಶ್ವಗುರುವಾಗುತ್ತದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶ್ರೀಗಳು, ಶರಣ ಸಂಸ್ಕøತಿ ಆಚರಣೆ ಕುರಿತು ನೆರದಿದ್ದ ಭಕ್ತ ಸಮೂಹದಿಂದ ಸಲಹೆ, ಅಭಿಪ್ರಾಯಗಳನ್ನು ಕೇಳಿದರು ಹಾಗು ಅವರೊಡನೆ ಸಂವಾದ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶರಣ ಸಂಸ್ಕøತಿ ಉತ್ಸವ 2021ರ ಗೌರಾವಾಧ್ಯಕ್ಷರಾದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸಮಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿ ಶ್ರೀ ಎ.ಜೆ.ಪರಮಶಿವಯ್ಯ, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ ಸುನಂದಾ ಹಳಕಟ್ಟಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
