ಮೈಸೂರು:
ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವದ ದಿನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆಗೆದ ಪ್ರಕರಣ ಖಂಡಿಸಿ, ಸಂವಿಧಾನ ರಕ್ಷಣಾ ಸಮಿತಿ ಸೋಮವಾರ ಕರೆ ನೀಡಿದ್ದ ‘ಮೈಸೂರು ಬಂದ್’ ವೇಳೆ ಪ್ರತಿಭಟನಕಾರರು ಬಸ್ಗಳು ಹಾಗೂ ಹೋಟೆಲ್ಗಳ ಮೇಲೆ ಕಲ್ಲು ತೂರಿದ್ದಾರೆ.
ಕೆಎಸ್ಆರ್ಟಿಸಿ ನಗರ ಬಸ್ನಿಲ್ದಾಣದ ಒಳಗೆ ನಿಂತಿದ್ದ ಬಸ್ವೊಂದರ ಮೇಲೆ ಕಲ್ಲು ತೂರಿದ್ದರಿಂದ ಮುಂಭಾಗದ ಗಾಜು ಪುಡಿಯಾಗಿದೆ. ಪುರಭವನದ ಮುಂಭಾಗವೂ ಬಸ್ವೊಂದರ ಮೇಲೆ ಕಲ್ಲು ತೂರಲಾಗಿದೆ.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಪ್ರತಿಕ್ರಿಯಿಸಿ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ಶಿವರಾಮಪೇಟೆ ಸೇರಿದಂತೆ ಹಲವೆಡೆ ಬಾಗಿಲು ತೆರೆದಿದ್ದ ಹೋಟೆಲ್ಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ. 4 ಹೋಟೆಲ್ಗಳ ಮೇಲೆ ಕಲ್ಲು ತೂರಲಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
