ಬೆಂಗಳೂರು
ಜನರಿಗೆ ನೀಡಿದ ಐದೂ ಗ್ಯಾರಂಟಿ ಯೋಜನೆಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಾರಿ ಮಾಡುವುದು ಶತ:ಸ್ಸಿದ್ದ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಗಿಂದು ಭರವಸೆ ನೀಡಿದ್ದಾರೆ.
ಚುನಾವಣೆಗೂ ಮುನ್ನ ಜನರಿಗೆ ನೀಡಿದ ಐದು ಗ್ಯಾರಂಟಿಗಳನ್ನು ಈಡೇರಿಸುವ ವಿಷಯದಲ್ಲಿ ಕಾರ್ಯಪ್ರ ಋತ್ತರಾಗಿದ್ದೇವೆ.ಈ ಯೋಜನೆಗಳನ್ನು ಈಡೇರಿಸದೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆಯ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಅವರು,ಈಗಾಗಲೇ ನಾವು ಹೇಳಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.
ಮನೆ ಒಡತಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗೃಹ ಲಕ್ಷಿ÷್ಮ ಯೋಜನೆಯ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಇದೇ 16 ರಿಂದ ಆರಂಭವಾಗಲಿದೆ ಎಂದರು.
ನಿರುದ್ಯೋಗಿಗಳಿಗೆ ಮಾಸಿಕ ಮೂರು ಸಾವಿರ ರೂಪಾಯಿ ನೀಡುವ ಯುವನಿಧಿ ಯೋಜನೆ ನವೆಂಬರ್ ತಿಂಗಳಿನಿಂದ ಜಾರಿಯಾಗಲಿದೆ ಎಂದ ಅವರು,ಪ್ರಸಕ್ತ ವರ್ಷ ಪದವಿ,ಡಿಪ್ಲೊಮಾ ಮಾಡಿದ ಯುವಕ,ಯುವತಿಯರು ಆರುತಿಂಗಳ ಒಳಗಾಗಿ ಉದ್ಯೋಗ ಪಡೆಯದಿದ್ದರೆ ಸರ್ಕಾರದ ನಿರುದ್ಯೋಗ ಭತ್ಯೆ ಪಡೆಯಲಿದ್ದಾರೆ ಎಂದರು.
ಈ ವರ್ಷ ಪದವಿ ಪಡೆಯುವವರು ಎಷ್ಟು ಮಂದಿ?ಈ ಪೈಕಿ ಎಷ್ಟು ಮಂದಿ ಉದ್ಯೋಗ ಪಡೆಯಲಿದ್ದಾರೆ?ಎಂಬ ಕುರಿತು ಸರ್ಕಾರಕ್ಕೆ ಇನ್ನೂ ಮಾಹಿತಿ ಬೇಕು. ಹೀಗಾಗಿ ಯುವನಿಧಿ ಯೋಜನೆ ಜಾರಿಗೆ ಬರಲು ಸ್ವಲ್ಪ ಕಾಲಾವಕಾಶ ಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು,ಇವತ್ತು ಸರ್ಕಾರದ ಗ್ಯಾರಂಟಿಗಳ ವಿರುದ್ಧ ಮಾತನಾಡುವ ಭರದಲ್ಲಿ ನಿಮ್ಮ ಪಶ್ಚಾತ್ತಾಪ ಪ್ರತಿಭಟನೆ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರಮೋದಿ ಅವರು ತಾವು ಕೊಟ್ಟ ಭರವಸೆಯನ್ನು ಇಷ್ಟು ಕಾಲದವರೆಗೆ ಈಡೇರಿಸಿಲ್ಲ.ಆದರೆ ನಾವು ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಕೆಲಸ ಮಾಡಿದ್ದೇವೆ.ಈ ಈಡೇರಿಕೆಗೆ ಕಾಲಾವಕಾಶ ಬೇಕು ಎಂದು ನುಡಿದರು.
ಇವತ್ತು ನೀವೇನೇ ಪ್ರತಿಭಟನೆ ಮಾಡಿದರೂ ರಾಜ್ಯದ ಜನ ನಂಬುವುದಿಲ್ಲ.ಬದಲಿಗೆ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುತ್ತಿದ್ದಾರೆ.ಹೀಗಿರುವಾಗ ನೀವೇಕೆ ಸುಮ್ಮನೆ ಇಲ್ಲ ಸಲ್ಲದ್ದನ್ನು ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುತ್ತೀರಿ ಎಂದು ವ್ಯಂಗ್ಯವಾಡಿದರು.
ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಕುಸಿದಿದೆ.ನೀವು ರಾಜ್ಯದಿಂದ ಇಪ್ಪತ್ತೆöÊದು ಮಂದಿ ಸಂಸದರು ಆಯ್ಕೆಯಾಗಿದ್ದೀರಲ್ಲ?ನೀವು ಪ್ರಧಾನಿ ನರೇಂದ್ರಮೋದಿ ಅವರಿಗೆ ಹೇಳಿ ಪೆಟ್ರೋಲ್,ಡೀಸೆಲ್ ಬೆಲೆ ಇಳಿಯುವಂತೆ ನೋಡಿಕೊಳ್ಳಿ ಎಂದು ಹೇಳಿದರು.
ಇದಕ್ಕೂ ಮುನ್ನ ಸದನದಲ್ಲಿ ನಿಲುವಳಿ ಸೂಚನೆಮಂಡಿಸಿದ್ದಲ್ಲದೆ,ಜನರಿಗೆ ನೀಡಿದ ಐದು ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ನಾಯಕ ಆರ್.ಅಶೋಕ್ ಅವರು,ಚುನಾವಣೆಗೂ ಮುನ್ನ ಜನರಿಗೆ ಐದು ಗ್ಯಾರಂಟಿಗಳನ್ನು ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರಿ.ಆದರೆ ಅದನ್ನುಈಡೇರಿಸಲು ನೀವು ವಿಫಲರಾಗಿದ್ದೀರಿ ಎಂದು ಟೀಕಿಸಿದರು.
ಅಧಿಕಾರಕ್ಕೆ ಬಂದರೆ ಸರ್ಕಾರದ ಎಲ್ಲ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಹೇಳಿದ್ದಿರಿ.ಆದರೆ ಈಗ ಐಷಾರಾಮಿ ಬಸ್ಸುಗಳು, ರಾಜಹಂಸ, ಐರಾವತ, ಹವಾನಿಯಂತ್ರಿತ ಬಸ್ಸುಗಳಲ್ಲಿ ಈ ಪ್ರಯಾಣದ ಸೌಲಭ್ಯವಿಲ್ಲ ಎಂದಿದ್ದೀರಿ.
ಹೀಗೆ ನೀವು ಕೊಟ್ಟ ಮಾತನ್ನು ಪರಿಪೂರ್ಣವಾಗಿಯೂ ಈಡೇರಿಸಲಿಲ್ಲ.ಅದೇ ಕಾಲಕ್ಕೆ ನಿಮ್ಮ ತೀರ್ಮಾನದಿಂದ ಖಾಸಗಿ ಬಸ್ಸುಗಳ ಮಾಲೀಕರು ಮತ್ತು ಆಟೋರಿಕ್ಷಾದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಏರಿದ ಧ್ವನಿಯಲ್ಲಿ ಟೀಕೆ ಮಾಡಿದರು.
ಜನರಿಗೆ ಭಾಗ್ಯ ನೀಡುವ ಭರವಸೆ ನೀಡಿ ಈಗ ವಿಳಂಬ ಮಾಡುತ್ತಿದ್ದೀರಿ.ಹೀಗಾಗಿ ನಿಮ್ಮ ಭಾಗ್ಯ ಜನರ ಪಾಲಿನ ದೌರ್ಭಾಗ್ಯವಾಗಿದೆ ಎಂದು ಟೀಕಿಸಿದರು.
ಶಾಸಕ ಸುನೀಲ್ ಕುಮಾರ್ ಅವರು ಮಾತನಾಡಿ,ನೀವು ಗ್ಯಾರಂಟಿಗಳನ್ನು ಘೋಷಿಸುವ ಸಂದರ್ಭದಲ್ಲಿ ಏನು ಹೇಳಿದ್ದಿರೋ?ಅದನ್ನು ಈಡೇರಿಸುವ ಸಮಯ ಬಂದಾಗ ಹೇಳಿಂತೆ ನಡೆದುಕೊಳ್ಳುತ್ತಿಲ್ಲ.ನಿಮ್ಮ ಈ ನಡವಳಿಕೆಯನ್ನು ನಾವು ವಿರೋಧಿಸುತ್ತಿದ್ದೇವೆ ಎಂದರು.
ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಾಗ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಛೇಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ:ನೀವೇನೇ ಕೂಗಾಡಿದರೂ ನಿಮ್ಮ ಪಕ್ಷದವರು ನಿಮ್ಮನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡುವುದಿಲ್ಲ ಎಂದರು.
ಸದನ ಆರಂಭವಾಗಿ ಮೂರು ದಿನ ಕಳೆದರೂ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಆಗುತ್ತಿಲ್ಲ.ಆದರೆ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದೀರಿ ಎಂದರು.ಈ ಹಂತದಲ್ಲಿ ಪುನ: ಸರ್ಕಾರ ಮತ್ತು ವಿರೋಧಪಕ್ಷಗಳ ನಡುವೆ ಟೀಕೆ,ಪ್ರತಿಟೀಕೆಗಳು ನಡೆದು ಗೊಂದಲದ ವಾತಾವರಣ ಕಾಣಿಸಿಕೊಂಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
