ಅದ್ದೂರಿ ಆಗಿ ಮುಹೂರ್ತ ಕಾರ್ಯ ಕ್ರಮ ಮುಗಿಸಿಕೊಂಡ “ದೇವರು ರುಜು ಮಾಡಿದನು” ಚಿತ್ರತಂಡ….!

ಬೆಂಗಳೂರು :
 
    ನಿರ್ದೇಶಕ ಸಿಂಪಲ್ ಸುನಿ ಅವರು ಆಯಕ್ಷನ್ ಕಟ್ ಹೇಳಲಿರುವ ದೇವರು ರುಜು ಮಾಡಿದನು ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ದೇವರು ರುಜು ಮಾಡಿದನು ಸಿನಿಮಾದ ಮುಹೂರ್ತ ನೆರವೇರಿದೆ.
ಈ ಸಿನಿಮಾದ ಮೂಲಕ ಯುವ ನಟ ವಿರಾಟ್ ಅವರು ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.ಇನ್ಣು ವಿರಾಟ್ ಜೋಡಿಯಾಗಿ ಕನ್ನಡದ ಖ್ಯಾತ ಶ್ರುತಿ ಮತ್ತು ಶರಣ್ ಅವರ ಕೊನೆಯ ಸಹೋದರಿ ಉಷಾ ಅವರ ಪುತ್ರಿ ಕೀರ್ತಿ ಅಭಿನಯಿಸಲಿದ್ದಾರೆ. ‌

ಸೊಗಸಾದ ಸಂಗೀತದ ಕಥೆ ಜೊತೆಗೆ ರಕ್ತ ಚರಿತ್ರೆಯನ್ನು ಸುನಿ ಹೇಳೋದಿಕ್ಕೆ ಹೊರಟಿದ್ದಾರೆ. ‘ದೇವರು ರುಜು ಮಾಡಿದನು’ ಟೀಸರ್ ಬಹಳ ಇಂಪ್ರೆಸಿವ್ ಆಗಿದೆ. ಕ್ಯಾಮೆರಾ ವರ್ಕ್, ಅದ್ಭುತ ಸಂಗೀತದೊಂದಿಗೆ ನಾಯಕ ವಿರಾಜ್, ನಾಯಕಿಯರಾದ ಕೀರ್ತಿ ಕೃಷ್ಣ ಹಾಗೂ ದಿವಿತಾ ರೈ ಅಭಿನಯದಲ್ಲಿ ಟೀಸರ್ ತೂಕ ಹೆಚ್ಚಿಸಿದೆ.ಮುಹೂರ್ತದ ಬಳಿಕ ಮಾತನಾಡಿದ ವಿರಾಜ್ ಅವರು, ತುಂಬಾ ಖುಷಿಯಾಗುತ್ತಿದೆ. ಇದು ನನ್ನ ಎಷ್ಟೋ ವರ್ಷದ ಕನಸು. ಚಿಕ್ಕವನಿದ್ದಾಗಿನಿಂದಲೂ ನಟನಾಗಬೇಕು ಎಂಬ ಆಸೆ ನನ್ನಲ್ಲಿತ್ತು. ಸ್ಕೂಲ್ ಟೀಚರ್ಸ್ ಡ್ಯಾನ್ಸ್, ನಟನೆ ಮಾಡು ಎಂದು ಹೇಳುತ್ತಿದ್ದರು. ನಾನು ಆಗ ಮಾಡುತ್ತಿದ್ದೆ. ಆಗ ನನ್ನ ಫ್ರೆಂಡ್ಸ್ ಚಪ್ಪಾಳೆ ತಟ್ಟುತ್ತಿದ್ದರು. ಆಗ ಇದೇನೂ ಕಿಕ್ ಇದೆಯಲ್ಲಾ, ಸಖತ್ ಇದೆ ಎನಿಸುವುದು. ಕಲಾವಿದರಿಗೆ ಇದೆ ಬೇಕಿರುವುದು. ಜನ ಕೊಡುವ ರೆಸ್ಪಾನ್ಸ್ ಅದು ವಂಡರ್ ಫುಲ್.

Recent Articles

spot_img

Related Stories

Share via
Copy link
Powered by Social Snap