ಗೋಕಾಕ:
ಶಿರಹಟ್ಟಿ ತಾಲೂಕಿನ ಕನಕವಾಡದ ಶ್ರೀ ಅಲ್ಲಮಪ್ರಭು ಗ್ರಾಮೀಣಾಭಿವೃದ್ಧಿ ಶಿಕ್ಷಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಮಾಡುವ 2024 ರ ಅಲ್ಲಮ ಶ್ರೀ ಪ್ರಶಸ್ತಿಗೆ ಗೋಕಾಕ ತಾಲೂಕಿನ ಸುಣದೊಳಿ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠದ ಪೀಠಾದಿಪತಿಗಳಾದ ಶ್ರೀ ಶಿವಾನಂದ ಮಹಾಸ್ವಾಮಿಗಳು ಭಾಜನರಾಗಿದ್ದಾರೆ.
ಇವರ ಸಾಮಾಜಿಕ ಸೇವೆ, ತ್ರಿವಿಧ ದಾಸೊಹ, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ, ಆಧುನಿಕ ಕೃಷಿ ಪದ್ದತಿ ಹಾಗೂ ಇತರೆ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಇದೆ ಡಿ.15 ರವಿವಾರದಂದು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಶ್ರೀ ಮಠದ ಭಕ್ತರು, ಅಧ್ಯಕ್ಷರು ಹಾಗೂ ಪಧಾದಿಕಾರಿಗಳು ಅಭಿನಂದಿಸಿದ್ದಾರೆ.
