ಬೆಂಗಳೂರು
ಯುಗಾದಿ ಹಬ್ಬವನ್ನು ನಗರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಲವರು ಮನೆಯಲ್ಲಿ ಪೂಜೆ ಪುನಸ್ಕಾರದೊಂದಿಗೆ ಹೊಸಬಟ್ಟೆ ತೊಟ್ಟು, ಹೆಣ್ಣು ಮಕ್ಕಳು ಬೇವು ಬೆಲ್ಲವನ್ನು ಮನೆಮನೆಗೆ ಬೀರುತ್ತಿದ್ದಾರೆ.ಈ ನಡುವೆ ಬೆಂಗಳೂರು ರಾಜರಾಜೇಶ್ವರಿ ಕ್ಷೇತ್ರದ ಎಂಎಲ್ಎ ಮುನಿರತ್ನ ಮತ್ತು ಸ್ನಾತಕ, ಸ್ನಾತಕೋತ್ತರ ಪದವೀಧರರ ಒಕ್ಕೂಟ ಮತ್ತು ಭಾರತೀಯ ವಿದ್ಯಾರ್ಥಿಯರ ಸೇವಾ ಸಂಘಟನಾ ಟ್ರಸ್ಟ್ ಹಾಗೂ ಭಾರತೀಯ ಸಮಾಜ ಸೇವಾ ಸಂಘ ಸಂಸ್ಥೆಗಳ ಸಂಘಟನಾ ಪರಡರೇಷನ್, ಸಂಸ್ಥಾಪಕ ಅಧ್ಯಕ್ಷರಾದ ವಿ ಅನಂತರಾಜು , ಶಂಕರನಾತ್ಮನಂದ ಸರಸ್ವತಿ ಮಹಾಸ್ವಾಮೀಜಿಗಳು ಸೇರಿದಂತೆ ಅನೇಕ ಗಣ್ಯರು ಯುಗಾದಿ ಹಬ್ಬದ ಹಿನ್ನೆಲೆ ಪೌರಕಾರ್ಮಿಕರಿಗೆ ಸೀರೆ ಮತ್ತು ಸಿಹಿ ವಿತರಣೆ ಮಾಡುವುದರ ಮೂಲಕ ಸಂಭ್ರಮಾಚರಣೆ ಮಾಡಿದರು ಹಾಗೆ ಕಾರ್ಯಕ್ರಮದಲ್ಲಿ ಸಂಘಟನೆಯ ಎಲ್ಲಾ ತಾಲೂಕು ಜಿಲ್ಲಾ ನಗರ ರಾಜ್ಯ ಸಮಿತಿಯ ಸದಸ್ಯರಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಂಎಲ್ಎ ಮುನಿರತ್ನ, ತ್ರಿವೇಣಿ , ಮಹೇಂದ್ರ ಕುಮಾರ್, ಕಾರ್ಮಿಕರ ಅಧ್ಯಕ್ಷ ರವಿಕುಮಾರ್, ಪರಸಪ್ಪ, ದೇವೆಂದ್ರಚಾರ್, ಚಿದಾನಂದ್, ಉಮಾಶಂಕರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು
