ತಾಳ್ಮೆ ಇರುವ ಏಕೈಕ ವ್ಯಕ್ತಿ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ : ಬ್ಯಾಂಕ್ ಸೂರನಾಯಕ

ನಾಯಕನಹಟ್ಟಿ :

   224 ಶಾಸಕರುಗಳಲ್ಲಿ ತಾಳ್ಮೆ ಇರುವ ಏಕೈಕ ವ್ಯಕ್ತಿ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಎಂದು ಕಾಂಗ್ರೆಸ್ ಮುಖಂಡ ಬ್ಯಾಂಕ್ ಸೂರನಾಯಕ ಹೇಳಿದರು.

    ಪಟ್ಟಣದ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1984 ರಿಂದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಬಾರಿಸಿರುವ ಶಾಸಕ ಎನ್.ವೈ.ಗೋಪಾಲಕೃಷ್ಣ ರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಒತ್ತಾಯಿಸಿದ್ದಾರೆ.

   ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಟಿ.ಕಾಟಯ್ಯ ಮಾತನಾಡಿ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಈ ಕ್ಷೇತ್ರದ ಮತದಾರರ ಅಚ್ಚುಮೆಚ್ಚಿನ ಶಾಸಕರಾಗಿದ್ದಾರೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಹಿಂದುಳಿದಿದೆ ಶಾಸಕ ಎನ್.ವೈ.ಗೋಪಾಲಕೃಷ್ಣ ರವರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದರು.

  ಸರಳ ಸಜ್ಜನಿಕೆಗೆ ಹೆಸರಾದ ಶಾಸಕ ಎನ್.ವೈ.ಗೋಪಾಲಕೃಷ್ಣ ರವರ ಹಿರಿಯರು ಆಗಿದ್ದಾರೆ ಮಂತ್ರಿ ಸ್ಥಾನ ಸಿಗಬೇಕಿತ್ತು, ಈಗಲಾದರು ಅವರು ಮಂತ್ರಿಯಾಗುವ ಭಾಗ್ಯ ಸಿಗಲಿ ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರಲ್ಲಿ ಮೊರೆಯಿಡತ್ತೇನೆ ಎಂದು ನಿವೃತ್ತ ಗ್ರಾಮೀಣ ಬ್ಯಾಂಕ್ ಸಿನಿಯರ್ ಮ್ಯಾನೇಜರ್ ಕೆ.ಪಿ.ರುದ್ರಮುನಿ ಯವರು ಹೇಳಿದರು. 

  ಕಾಂಗ್ರೆಸ್ ಮುಖಂಡ ಜಿ.ತಿಪ್ಪೇಸ್ವಾಮಿ ಮಾತನಾಡಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದಿರುವ ಎನ್.ವೈ.ಗೋಪಾಲಕೃಷ್ಣರವರಿಗೆ ಮಂತ್ರಿ ಸ್ಥಾನ ನೀಡಲೇ ಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

   ಈ ಸಂದರ್ಭದಲ್ಲಿ ಉಪಸ್ಥಿತರಾದ ಜಿ.ತಿಪ್ಪೇಸ್ವಾಮಿ, ಎನ್.ದೇವರಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕಾಟಂ ಲಿಂಗಯ್ಯ , ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಭೀಮನಕೆರೆ ನಾಗರಾಜ್, ಹಿರೇಹಳ್ಳಿ ಕೃಷ್ಣಪ್ಪ, ನೇರಲಗುಂಟೆ ರಾಮಣ್ಣ, ಎನ್.ದೇವರಹಳ್ಳಿ ಗ್ರಾ.ಪಂ ಅಧ್ಯಕ್ಷ ರಾಜಣ್ಣ, ಚಂದ್ರಕಾಂತ್ , ಗಿಡ್ಡಯ್ಯ, ವರವು ಸುರೇಶ್, ವರವು ರಾಜಣ್ಣ ಗ್ರಾ.ಪಂ ಸದಸ್ಯ , ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಇದ್ದರು.

Recent Articles

spot_img

Related Stories

Share via
Copy link