ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು …..!

ಬೆಂಗಳೂರು:

   ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ನಟ ಮಡೆನೂರು ಮನು ಕ್ಷಮೆಯಾಚಿಸಿದ್ದಾರೆ. ಈ ಹಿಂದೆ ವೈರಲ್ ಆಗಿದ್ದ ಆಡಿಯೋ ವಿಚಾರಕ್ಕೆ ಸಂಬಂಧಿಸಿ ಕಂಠೀರವ ಸ್ಟುಡಿಯೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ಅವರ ಕಾಲಿಗೆ ಬಿದ್ದು ಮಡೆನೂರು ಮನು  ಕ್ಷಮೆ ಕೋರಿದ್ದಾರೆ.

   ಶಿವರಾಜ್‌ ಕುಮಾರ್‌ ಸೇರಿ ಸ್ಯಾಂಡಲ್‌ವುಡ್‌ ಪ್ರಮುಖ ನಟರ ಸಾವಿನ ಬಗ್ಗೆ ಮನು ಮಾತನಾಡಿದ್ದ ಆಡಿಯೋ ವೈರಲ್‌ ಆಗಿತ್ತು. ಹೀಗಾಗಿ ಮನು ಮೇಲೆ ಚಿತ್ರರಂಗದಿಂದ ನಿಷೇಧ ಹೇರಲಾಗಿತ್ತು. ಬಳಿಕ ಹಲವು ಬಾರಿ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ, ಕ್ಷಮೆ ಕೇಳಲು ಪ್ರಯತ್ನಿಸಿದ್ದರು. ಆದರೇ ಅದು ಸಾಧ್ಯವಾಗಿರಲಿಲ್ಲ. ಇದೀಗ ಶಿವಣ್ಣ ಅವರನ್ನು ಭೇಟಿಯಾಗಿ ಕ್ಷಮೆಯಾಚಿಸಿದ್ದಾರೆ.

  ಮಡೆನೂರು ಮನು ಜೈಲಿಂದ ಹೊರಬಂದ ಮೇಲೆ ಆ ಆಡಿಯೋ ನನ್ನದಲ್ಲ, ನಾನು ಎಲ್ಲ ನಟರ ಬಳಿ ಕ್ಷಮೆ ಕೇಳುವುದಾಗಿ ಹೇಳಿದ್ದರು. ಬಳಿಕ ಅವರ ಮೇಲಿನ ನಿಷೇಧ ತೆರವು ಮಾಡುವುದಾಗಿ ಫಿಲ್ಮ್‌ ಚೇಂಬರ್‌ ತಿಳಿಸಿತ್ತು.

Recent Articles

spot_img

Related Stories

Share via
Copy link