ನೀರು ಕಾಯಿಸಲು ಹೋಗಿ ವಿದ್ಯುತ್ ಸ್ಪರ್ಷದಿಂದ ಮೃತಪಟ್ಟ ಬಾಲಕಿ.

ಕೂಡ್ಲಿಗಿ:

   ನೀರು ಕಾಯಿಸಲು ಹಾಕಿದ್ದ ವಿದ್ಯುತ್ ಹೀಟರ್ ಸ್ಪರ್ಷವಾಗಿ ಕೆ.ಎಚ್. ಭಾಗ್ಯಶ್ರೀ(15) ಮೃತಪಟ್ಟ ಘಟನೆ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

   ಕಕ್ಕುಪ್ಪಿ ಗ್ರಾಮದ ಕೆ. ಹುಲೇಶ್, ಪುತ್ರಿಯಾದ ಭಾಗ್ಯಶ್ರೀ, 9ನೇ ತರಗತಿ ಓದುತ್ತಿದ್ದು, ಬುಧವಾರ ಬೆಳಿಗ್ಗೆ ಶಾಲೆಗೆ ಹೋಗಲೆಂದು ವಾಟರ್ ಹೀಟರ್ ಹಾಕಿ ನೀರು ಕಾಯಿಸಿಕೊಂಡು ಸ್ನಾನ ಮಾಡಿ, ನಂತರ ತನ್ನ ತಾಯಿಗೆ ನೀರು ಕಾಯಿಸಲು ಇಟ್ಟಿದ್ದರು. ವಾಟರ್ ಹೀಟರ್ ಸ್ವೀಚ್ ಆಫ್ ಮಾಡದೆ ಹೀಟರನ್ನು ಆಕಸ್ಮಿಕವಾಗಿ ಕೈಯಿಂದ ಹಿಡಿದುಕೊಂಡಾಗ ವಿದ್ಯುತ್ ಸ್ಪರ್ಷವಾಗಿದೆ. ಭಾಗ್ಯಶ್ರೀಯನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.ಅಷ್ಟರಲ್ಲಿ ಬಾಲಕಿ ಪ್ರಾಣ ಪಕ್ಷಿ ಹಾರಿಹೋಗಿತ್ತು, ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

   ಶಾಸಕರ ಭೇಟಿ ಸಾಂತ್ವಾನ: ವಿಷಯ ತಿಳಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಮೃತ ಬಾಲಕಿ ಶವ ಇಟ್ಟಿದ್ದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಅಂತ್ಯ ಸಂಸ್ಕಾರಕ್ಕಾಗಿ ಸಹಾಯಧ ನೀಡಿ ಕುಟುಂಬದವರಿಗೆ ದೈರ್ಯ ಹೇಳಿದರು.

Recent Articles

spot_img

Related Stories

Share via
Copy link