ವಿದ್ಯಾರ್ಥಿನಿಯ ನಿರ್ಧಾರ ಮೆಚ್ಚುವಂತಹದ್ದು

ತಿಪಟೂರು :

                    ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಫರ್ಧೆಯಲ್ಲಿ ತಿಪಟೂರಿನ ಬಾಲಕೀಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿನಿಯರು ಪ್ರಥಮಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ತಾಲ್ಲೂಕಿಗೆ ಮತ್ತು ಶಾಲೆಗೆ ಕೀರ್ತಿತಂದಿರುತ್ತಾರೆ. ಆದರೆ ಈ ವಿದ್ಯಾರ್ಥಿನಿಯರಾದ ವಿಶ್ವಸ್ನೇಹ.ಸಿ.ವಿ, ರುಚಿತ.ಎ.ಎಸ್, ದೀಪ್ತಿ.ಡಿ.ಎನ್, ಯಶಸ್ವಿನಿ.ಎ.ಎನ್, ಹರ್ಷಿತ.ಜೆ.ಸಿ, ಐಶ್ವರ್ಯ.ಡಿ, ದೀಪಿಕ.ಹೆಚ್.ಸಿ, ಭೂಮಿಕ.ಪಿರವರು ತಮಗೆ ಬಂದಂತಹ ಬಹುಮಾನವನ್ನು ಕೊಡಗಿನಲ್ಲಿ ಸಂಕಷ್ಠದಲ್ಲಿರುವವರ ಸಂಕಷ್ಟಕ್ಕೆ ತಮ್ಮ ಅಳಿಲು ಸೇವೆಸಲ್ಲಿಸುವ ಮನೋಭಿಲಾಷೆಯಿಂದ ಮುಖ್ಯಮಂತ್ರಿಗಳ ಪರಿಹಾರನಿಧಿಗೆ ತಲುಪಿಸುವಂತೆ ಕೋರಿರುತ್ತಾರೆ. ಇವರ ಕಾರ್ಯವನ್ನು ಉಪಪ್ರಾಚಾರ್ಯರು ಹಾಗೂ ಶಿಕ್ಷಕ ವೃಂದವು ಶ್ಲಾಘಿಸಿದ್ದಾರೆ

Recent Articles

spot_img

Related Stories

Share via
Copy link
Powered by Social Snap