ಪಟ್ಟಣದ ಸ್ಡೇಡಿಯಂ ಅಭಿವೃದ್ದಿಗೆ ಕ್ರಮ

ಪಟ್ಟಣದ ಸ್ಡೇಡಿಯಂ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಯುವ ಜನ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದಶಕ ಶ್ರೀನಿವಾಸ ಹೇಳಿದ್ದಾರೆ.
ಅವರು ಪಟ್ಟಣದ ಸ್ಟೇಡಿಯಂ ಗೆ ಮಂಗಳವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಜಿ.ಪಂ ಯಿಂದ 6 ಲಕ್ಷ ರು.ಗಳು ಬಿಡುಗಡೆಗೊಂಡಿದ್ದು, ಅದರಲ್ಲಿ ಕೌಕ್ಯಾಚ್ , ಸುಣ್ಣ ಬಣ್ಣ, ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಇತರ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸ್ಡೇಡಿಯಂ ನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲು ಭೂ ಸೇನಾ ನಿಗಮದ ಇಂಜಿನಿಯರಿಗೆ ಸೂಚಿಸಲಾಗಿದೆ, ಎಂದು ಅವರು ನುಡಿದರು.
ಜಗಳೂರಿನಲ್ಲಿ ಎಸ್ ಸಿ ಪಿ , ಟಿಎಸ್ ಪಿ ಯೋಜನೆಯಲ್ಲಿ 22 ಲಕ್ಷ ರು.ಗಳ ವೆಚ್ಚದಲ್ಲಿ ವ್ಯಾಯಮ ಶಾಲೆ ಹಾಗೂ ಕಾಮಗಾರಿ 3 ಲಕ್ಷ ರು.ಗಳ ವೆಚ್ಚದಲ್ಲಿ ವಿವಿಧ ಅಂಕÀಣಗಳ ಕ್ರೀಡಾಂಗಣ ಅಭಿವೃದ್ದಿ ಪಡಿಸಲಾಗಿದೆ , ಚೆನ್ನಗಿರಿಯಲ್ಲೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಲು ಹೇಳಲಾಗಿದೆ ಎಂದರು.
ಕ್ರೀಡಾ ಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದರೆ ಅಂತವರಿಗೆ 10 ಸಾವಿರ ಸ್ಕಾಲರ್ ಶಿಪ್ ನೀಡಲಾಗುವುದು ಆದರೆ ಸಾಧನೆಗೆ ಹೋಗುವ ಸಾಧಕರಿಗೆ ಪೆÇ್ರೀತ್ಸಾಹ ಧನದ ವ್ಯವಸ್ಥೆ ಇಲ್ಲವಾಗಿದೆ, ಆ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.
ಶ್ರೀನಿವಾಸ ಅವರು ಸ್ಟೇಡಿಯಂ ನ ವಿವಿಧ ಭಾಗಗಳನ್ನು ವೀಕ್ಷಿಸಿದರು. ಇಲ್ಲಿ ಈಗ ತರಬೇತುದಾರರು ಅವಶ.ಕ್ಕತೆ ಇರುವುದನ್ನು ಒಪ್ಪಿಕೊಂಡ ಅವರು ತಾಲೂಕು ಕೇಂದ್ರಕ್ಕೆ ಒಬ್ಬ ತರಬೇತುದಾರರು ಇರಬೇಕು ಆದರೆ ಇಲಾಖೆಯಲ್ಲಿ ತರಬೇತುದಾರರ ಕೊರತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಲ್ಲಿ ಅನೇಕ ವರ್ಷಗಳ ಕಾಲ ತರಬೇತುದಾರರಾಗಿ ಕಾರ್ಯನಿರ್ವಹಿಸಿ ಸ್ಡೇಡಿಯಂ ಅಭಿವೃದ್ದಿ ಹಾಗೂ ಕ್ರೀಡಾ ಪಟುಗಳ ಶ್ರೇಯೊಬಿವೃದ್ದಿಗೆ ಕಾರಣರಾಗಿ ಇದೀಗ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಖೋ ಖೋ ತರಬೇತುದಾ ಜೆ.ರಾಮಲಿಂಗಪ್ಪ ಹಾಗೂ ಮಂಜು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link