ದಾವಣಗೆರೆ:
ಶ್ರೀಕೃಷ್ಣ ಯಾದವ ವಿವಿದ್ದೋದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಭಾನುವಾರ ನಗರದ ವಿಜಯನಗರ ಬಡಾವಣೆಯಲ್ಲಿನ ಅಪೂರ್ವ ಚಿಟ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಕೆ.ಆರ್.ಜಯಶೀಲಾ ಉದ್ಗಾಟಿಸಿ ಮಾತನಾಡಿದ ಅವರು ಸಹಕಾರ ಸಂಘಗಳು ದುಡಿಯುವ ವರ್ಗಗಳಿಗೆ ಆಸರೆಯಾಗಿವೆ ಎಂದರು ಬ್ಯಾಂಕಿನಿಂದ ಸೌಲತ್ತು ಪಡೆದ ಗ್ರಾಹಕರು ಸಕಾಲಕ್ಕೆ ಸಾಲಮರುಪಾವತಿಮಾಡಿಕೊಂಡರೆ ಬ್ಯಾಂಕ್ ಅಭಿವೃಧಿಗೆ ಸಹಕಾರಿಯಾಗಲಿದೆ ಎಂದರು.ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರಾದ ಬೆಳಗಾಂ ಇವರುಮಾತನಾಡಿ ಸಹಕಾರ ಸಂಘಗಳಿಂದ ಸಾರ್ವಜನಿಕರು ಸಾಕಷ್ಟು ಅನುಕೂಲಕರವಾಗಿದೆ ನಿರಂತರವಾಗಿ ಇದರ ಸದ್ಭಳಕೆ ಮತ್ತು ಸಕಾಲಕ್ಕೆ ಮರುಪಾವತಿ ಬಗ್ಗೆ ಸುದಿರ್ಘವಾಗಿ ಮಾಹಿತಿ ನೀಡಿದರು.ತಹಶಿಲ್ದಾರ್ ಸಂತೋಷ್ಕುಮಾರ್ ಮಾತನಾಡಿದರು.ಬ್ಯಾಂಕ್ ಅಧ್ಯಕ್ಷರಾದ ಆರ್.ಶ್ರೀನಿವಾಸ್ ಅಧ್ಯಕ್ಷತೆವಹಿಸಿಮಾತನಾಡಿದರು.ಈಸಂದರ್ಭದಲ್ಲಿ ಕನಕಬ್ಯಾಂಕ್ ಅಧ್ಯಕ್ಷರಾದ ಹೆಚ್.ಜಿ.ಸಂಗಪ್ಪ,ಮಾಜಿನಗರಸಭೆಅಧ್ಯಕ್ಷರಾದ ಬಿ.ವೀರಣ್ಣ,ಎನ್.ಜೆ.ನಿಂಗಪ್ಪ,ಎನ್.ಟಿ.ಹನುಮಂತಪ್ಪ, ಉಪಾಧ್ಯಕ್ಷರಾದ ಬೀರಣ್ಣ,ಹೆಚ್.ತಿಪ್ಪಣ್ಣ,ಬಿ,ಎಂ.ಬಸವರಾಜ್.ಎನ್.ಸಿ ವಿಶ್ವನಾಥ್,ಬಿ.ಕೆ.ಕಲ್ಲೂರು.ಡಾ.ಮಲ್ಲಿಕಾರ್ಜುನಕಲಮರಹಳ್ಳಿ. ಹಾಗೂಎಲ್ಲಾ ನಿರ್ದೆಶಕರು ಉಪಸ್ಥಿತರಿದ್ದರು.








