ನವದೆಹಲಿ:
ಪ್ರಧಾನಿಯಾಗಿ ಮುಂದುವರಿಯಲು ಮೋದಿಯವರಿಗೆ ಯಾವುದೇ ನೈತಿಕತೆ ಇಲ್ಲ. ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ.
ನಾವು ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ. ರಫೇಲ್ ಡೀಲ್ ಭಾರೀ ಭ್ರಷ್ಟಾಚಾರದ ಹಗರಣ ಎಂದು. ಈಗ ಹಗರಣದ ಹೂರಣ ಏನೆಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷರ ಬಾಯಿಂದಲೇ ಬಂದಿದೆ. ಇದಕ್ಕಿಂತ ಬೇರೆ ಸಾಕ್ಷ್ಯ ಇನ್ನೇನು ಬೇಕು. ರಫೇಲ್ ವಿಮಾನ ಖರೀದಿಯಲ್ಲಿ 25 ಸಾವಿರ ಕೋಟಿ ಅವ್ಯವಹಾರ ನಡೆದಿದೆ.ಇದರ ಹೊಣೆ ಪ್ರಧಾನಿಯವರೇ ಹೊರಬೇಕು ಎಂದು ಆರೋಪಿಸಿದರು.
ನರೇಂದ್ರ ಮೋದಿಯವರು ಕೂಡಲೆ ರಾಜೀನಾಮೆ ಸಲ್ಲಿಸಬೇಕು ಮತ್ತು ಸಂಪುಟದ ಯಾವುದೇ ಸಚಿವರನ್ನು ಪ್ರಧಾನಿಯನ್ನಾಗಿ ಮಾಡಬೇಕು” ಎಂದು ಖರ್ಗೆ ಅವರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ