ರೋಟರಿ ಸಂಸ್ಥೆಯಿಂದ ರಾಷ್ಟ್ರದ ನಿರ್ಮಾಣ ಶಿಕ್ಷಕರ ಪ್ರಶಸ್ತಿ ವಿತರಣೆ

ಹಿರಿಯೂರು:

      ಭವ್ಯ ಭಾರತ ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಾಮುಖ್ಯವಾದುದು. ಆದ್ದರಿಂದ ಅಂತಹ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸಿ ರೋಟರಿಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂಬುದಾಗಿ ಬೆಂಗಳೂರು ಭವತಾರಿಣಿ ಆಶ್ರಮದ ಮಾತಾ ವಿವೇಕಮಯಿ ಹೇಳಿದರು.

     ನಗರದ ವೇದಾವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಸಂಸ್ಥೆ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ 2018-19ನೇ ಸಾಲಿನ “ರಾಷ್ಟ್ರ ನಿರ್ಮಾಣ ಶಿಕ್ಷಕನ ಪ್ರಶಸ್ತಿ” ವಿತರಣಾ ಸಮಾರಂಭ  ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ನಗರದ ಶ್ರೀಶಾರದಾ ಆಶ್ರಮದ ಮಾತಾ ಚೈತನ್ಯಮಯಿ, ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಸ್.ರಾಘವೇಂದ್ರ ಕಾರ್ಯದರ್ಶಿ ಹೆಚ್.ವೆಂಕಟೇಶ್, ಪ್ರಾಂಶುಪಾಲರಾದ ಚಂದ್ರಶೇಖರ್, ತಾ||ಪತ್ರಕರ್ತರ ಸಂಘದ  ಅಧ್ಯಕ್ಷ ಆಲೂರುಹನುಮಂತರಾಯಪ್ಪ, ರೊಟೇರಿಯನ್ ಗಳಾದ ಪ್ರೋ.ಬಿ.ಕೆ.ನಾಗಣ್ಣ, ಹೆಚ್.ಶಂಕರ್, ವೈ.ಎಸ್.ಉಮಾಶಂಕರ್, ಹೆಚ್.ಎಸ್.ಪ್ರಶಾಂತ್, ಮಹಾಬಲೇಶ್ವರಶೆಟ್ಟಿ, ಎಸ್.ಜೋಗಪ್ಪ, ಎ.ರಾಘವೇಂದ್ರ, ನಾಗರಾಜ್, ಸಣ್ಣಭೀಮಣ್ಣ, ವಿಶ್ವನಾಥ್,  ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link