ಮನೆಗೆ ನುಗ್ಗಿ ನಗದು ದೋಚಿ ಪರಾರಿಯಾದವರ ಬಂಧನ

ಬೆಂಗಳೂರು,:

  ಸ್ನೇಹಿತೆಯರ ಜೊತೆ ಮನೆಯಲ್ಲಿ ಊಟ ಮಾಡುವ ಸಮಯದಲ್ಲಿ ಪರಿಚಯಸ್ಥರ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು 30 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದ ಐವರನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ.

  ಕಾಮಾಕ್ಷಿಪಾಳ್ಯದ ಎನ್. ಸ್ವಾಮಿ(23)ಪ್ರದೀಪ್ ಕುಮಾರ್ ಅಲಿಯಾಸ್ ಪ್ರದೀಪ್(26)ಪ್ರಶಾಂತ್ ಕುಮಾರ್ ಅಲಿಯಾಸ್ ಪ್ರಸಾಂತ್(30)ಅಂಜನಾ ನಗರದ ಗಂಗಾಧರ ಅಲಿಯಾಸ್ ತಲೆಸವರ(28)ಕೆ.ಎಸ್.ಆರ್.ಟಿ.ಸಿ. ಲೇಔಟ್‍ನ ಅಶ್ವಿನಿ ಅಲಿಯಾಸ್ ಜಾಹ್ನವಿ(24)ಬಂಧಿತ ಆರೋಪಿಗಳಾಗಿದ್ದಾರೆ.

  ಮೈಕೋಲೇಔಟ್ ರಂಜಿತಾ ಸ್ನೇಹಿತೆಯಾದ ಆರೋಪಿ ಅಶ್ವಿನಿ ಉಳಿದ ಆರೋಪಿಗಳೊಂದಿಗೆ ಶಾಮೀಲಾಗಿ ಹಣದಾಸೆಗಾಗಿ ಸುಲಿಗೆಯನ್ನು
ಮಾಡಿಸಿರುವುದು ತನಿಖೆಯಲ್ಲಿ ತಿಳಿದು ಬಂದಿರುತ್ತದೆ. ಪ್ರಕರಣದಲ್ಲಿ ಸುಲಿಗೆ ಮಾಡಿದ ಚಿನ್ನದ ಸರ ಮತ್ತು 5,000 ರೂ. ನಗದು ಹಣವನ್ನು ವಶಪಡಿಸಿಕೊಂಡಿರುತ್ತದೆ ಎಂದು ಆಗ್ನೇಯ ವಿಭಾಗದ ಉಪ ಪೊಲೀಸ್ ಕಮೀಷನರ್ ಡಾ: ಬೋರಲಿಂಗಯ್ಯ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link