ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವ ಜೊತೆಗೆ ತಮ್ಮ ಆರೋಗ್ಯ ರಕ್ಷಣೆಗೆ ಗಮನ ಹರಿಸಿ

ಮಲೇಬೆನ್ನೂರು:

     ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವ ಜೊತೆಗೆ ತಮ್ಮ ಆರೋಗ್ಯ ರಕ್ಷಣೆಗೆ ಗಮನ ಹರಿಸಿ ಎಂದು ತಜ್ಞ ವೈದ್ಯ ಡಾ. ಬಿ.ಟಿ. ಅಪೂರ್ವ ತಾಕೀತು ಮಾಡಿದರು.

       ಪಟ್ಟಣದ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಪೌರ ಕಾರ್ಮಿಕ ದಿನಾಚರಣೆ- 2018ಕ್ಕೆ ಚಾಲನೆ ನೀಡಿ ಆರೋಗ್ಯ ಹಾಗೂ ಸುರಕ್ಷತೆ ಕುರಿತು ಉಪನ್ಯಾಸ ನೀಡಿದರು.

      ಯಾವುದೆ ರೋಗ ಬರದಂತೆ ತಡೆಯುವುದು ಮುಖ್ಯ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.
ಕಲುಷಿತ ವಾತಾವರಣದಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಿ, ಕೈ ಕವಚ, ಶೂ, ಮುಖ ಕವಚ ಹಾಕಿಕೊಂಡು ಸ್ವಚ್ಛತಾ ಕೆಲಸ ಮಾಡಿ. ಉತ್ತಮ ಆಹಾರ ಸೇವಿಸಿ, ಬೀಡಿ, ಸಿಗರೇಟು, ಮದ್ಯಪಾನ ದುಶ್ಚಟಗಳಿಂದ ದೂರವಿರಿ..

        ಕೆಲವು ಕಾಯಿಲೆ ಅಲಕ್ಷಿಸಿ, ಕಾಯಿಲೆ ಉಲ್ಬಣಿಸಿದಾಗ, ಚಿಕಿತ್ಸೆ ಪಡೆದರೂ ಗುಣ ಕಾಣದೆ ಜೀವಕ್ಕೆ ಹಾನಿ ನಿಶ್ಚಿತ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮುಖ್ಯಾಧಿಖಾರಿ ಹುಸೇನ್ ಸಾಬ್ ಎಫ್ ಬಿದರಿ, ಸರ್ಕಾರ ನೀಡುವ ಸೌಲಭ್ಯಗಳ ಪ್ರಯೋಜನ ಪಡೆಯಲು ಕೋರಿದರು. ಆರೋಗ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುನೀಡಿ ಎಂದು ಸಲಹೆ ನೀಡಿದರು.ಪುರಸಭಾ ಅಧ್ಯಕ್ಷೆ ಡಿ.ಕೆ. ಅಂಜಿನಮ್ಮ ಅಧ್ಯಕ್ಷತೆ ವಹಿಸಿ ಪೌರ ಕಾರ್ಮಿಕರಿಗೆ ಶುಭಕೋರಿದರು.ಸದಸ್ಯರಾದ ಯೂಸೂಫ್, ಬಿ. ಸುರೇಶ್, ಆರೀಫ್ ಅಲಿ, ಫೈಜು ಮಾತನಾಡಿದರು.

       ಸಿಂಗಪೂರಕ್ಕೆ ಅಧ್ಯಯನಕ್ಕೆ ತೆರಳಲಿರುವ ಪೌರ ಕಾರ್ಮಿಕರಾದ ಮಂಜುನಾಥ್, ಯಲ್ಲಪ್ಪ ಹಾಗೂ ರತ್ನಮ್ಮ ಸೇರಿದಂತೆ ಎಲ್ಲ ಪೌರ ಕಾರ್ಮಿಕರನ್ನು ಸನ್ಮಾನಿಸಿದರು.

       ಕರ್ನಾಟಕ ಪೌರ ಸೇವಾ ನೌಕರರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಶಿವಯೋಗಿ ಕುಳೆನೂರು, ಪರಿಸರ ಎಂಜಿನಿಯರ್ ಉಮೇಶ್, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link