ಪಟ್ಟಣದಲ್ಲಿ ಈದ್-ಮಿಲಾದ್ ಆಚರಣೆ

ಚಿಕ್ಕನಾಯಕನಹಳ್ಳಿ

      ಪ್ರವಾದಿ ಮಹಮದ್ ಪೈಗಂಬರ್‍ರವರ ಜನ್ಮದಿನ ಈದ್-ಮಿಲಾದ್‍ನ್ನು ಪಟ್ಟಣದ ಮುಸ್ಲಿಂ ಬಾಂಧವರು ವಿಜೃಂಭಣೆಯಿಂದ ಆಚರಿಸಿದರು.
ಪಟ್ಟಣದ ಐದು ಮಸೀದಿಗಳ ಮುಖಂಡರುಗಳು ಜಾಮೀಯ ಮಸೀದಿ ಬಳಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಬಳಿಕ ಈದ್ ಶುಭಾಷಯಗಳನ್ನು ಹೊತ್ತ ಮೆಕ್ಕ ಮಸೀದಿ ಮಾದರಿಯ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೆರವೇರಿಸಲಾಯಿತು.
ಮುಖಂಡರುಗಳಾದ ಜಮೀವುಲ್ಲಾ, ಜಸಾವುಲ್ಲಾ, ಮಾಜಿ ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಜಾವಿದ್‍ಪಾಷ ಸೇರಿದಂತೆ ಮುಸ್ಲಿಂ ಮುಖಂಡರುಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link