ಮಧುಗಿರಿ
ಕೊಡ್ಲಾಪುರ ಕೆರೆಗೆ ಹೋಗುವ ದಾರಿಯಲ್ಲಿನ ಹಳ್ಳದಲ್ಲಿ ಮಣ್ಣು ತುಂಬುವಾಗ ಆಕಸ್ಮಿಕವಾಗಿ ಮಣ್ಣಿನ ಗುಡ್ಡ ಕುಸಿತದಿಂದಾಗಿ ಕೂಲಿ ಕಾರ್ಮಿಕನೊಬ್ಬ ದುರಂತ ಸಾವಿಗೀಡಾಗಿರುವ ದುರ್ಘಟನೆ ನಡೆದಿದೆ.
ಪುರವರ ಹೋಬಳಿ ಉಪ್ಪಾರಪಾಳ್ಯದ ಮೂರ್ತಿ (38) ಎಂಬ ಕಾರ್ಮಿಕನೇ ಮೃತ ದುರ್ದೈವಿ. ಈತನ ಸಾವಿನ ಸುದ್ದಿಯನ್ನು ಕೇಳಿದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/WhatsApp-Image-2018-11-23-at-2.57.05-PM.jpeg)