ಬೆಳಗಾವಿ
ತಾವೆಂದಿಗೂ ಮೇಲ್ಮನೆಯ ಉಪಸಭಾಪತಿ ಸ್ಥಾನದ ಕನಸು ಕಂಡಿರಲಿಲ್ಲ. ತಮಗೆ ಈ ಸ್ಥಾನ ಅನಿರೀಕ್ಷಿತವಾಗಿ ಒಲಿದು ಬಂದಿದೆ ಎಂದು ನೂತನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಹೇಳಿದರು.
ಉಪಸಭಾಪತಿಯಾಗಿ ಆಯ್ಕೆಯಾದ ಬಳಿಕ ಮೇಲ್ಮನೆಯಲ್ಲಿ ಮಾತನಾಡಿದ ಅವರು, ತಂದೆ-ತಾಯಿಗಳ ಪುಣ್ಯ ಮತ್ತು ದೇವರ ಆಶೀರ್ವಾದದಿಂದ ತಮಗೆ ಹುದ್ದೆ ಒಲಿದಿದೆ ಎಂದರು.
ಸದಸ್ಯರ ಭಾವನೆಗಳಿಗೆ ಧಕ್ಕೆ ಭಾರದ ರೀತಿಯಲ್ಲಿ ಪಕ್ಷಾತೀತವಾಗಿ, ಸಂವಿಧಾನ ಬದ್ಧವಾಗಿ ಕೆಲಸ ಮಾಡಿ ಸದನದ ಗೌರವ ಹೆಚ್ಚಿಸಲು ಶ್ರಮವಹಿಸುವುದಾಗಿ ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/dharmegowda-1545142774.gif)