ಹಿರಿಯೂರು :
ರಾಜ್ಯದಲ್ಲಿ ನದಾಪ್/ ಪಿಂಜಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಂಘಟನೆಯ ಕೊರತೆಯಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂಬುದಾಗಿ ನಿವೃತ ಶಿಕ್ಷಕ ಎಚ್.ಹೊನ್ನೂರ್ಸಾಬ್ ಹೇಳಿದರು.
ನಗರದ ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿಸಭೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನದಾಫ್ ಸಮುದಾಯದವರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಸಿದ್ದು, ಎಲ್ಲ ಜಾತಿಯ ಜನರ ಜೊತೆ ಸೌಹಾರ್ದದ ಬದುಕು ನಡೆಸುತ್ತಿದ್ದಾರೆ. ಕೃಷಿಕೂಲಿ,ಸಣ್ಣಪುಟ್ಟ ವ್ಯವಹಾರವೇ ಅವರ ಬದುಕಿಗೆ ಆಧಾರ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ನಮ್ಮ ಸಂಘಟನೆ ಈ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನ ನಡೆಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಬಿ.ಗರೀಬ್ಅಲಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಕ್ತಿಮಾರ್ಗ ಕೃತಿಯ ಲೇಖಕ ಎಂ.ಎ. ಬುಡೇನ್ಸಾಬ್, ಜಾಮೀಯಾ ಮಸೀದಿ ಕಾರ್ಯದರ್ಶಿ ಕೆ. ರಫೀಕ್, ಮಹಮದ್ಆಲಿ, ಆರ್.ದಾದಾಫೀರ್ ಜಿಲ್ಲಾ ಕಾರ್ಯದರ್ಶಿ ಎಂ.ಬಿ.ಷಫೀವುಲ್ಲಾ, ಜಿಲ್ಲಾ ಖಜಾಂಚಿ ಮಹಮದ್ಷರೀಫ್ಸಾಬ್, ತಾಲ್ಲೂಕು ಅಧ್ಯಕ್ಷರಾದ ರಫೀದ್, ಉಪಾಧ್ಯಕ್ಷರಾದ ಟಿಪ್ಪುಸುಲ್ತಾನ್, ಕಾರ್ಯದರ್ಶಿ ಬಿ.ಕರೀಂಸಾಬ್, ಸಹಕಾರ್ಯದರ್ಶಿ ಬಿ.ದಾದಾವಲಿ, ಸಂಘಟನಾ ಕಾರ್ಯದರ್ಶಿ ಚಮನ್ಸಾಬ್, ಖಜಾಂಚಿ ಕೆ.ಬಿ.ಅಬ್ದುಲ್, ಲತೀಫ್, ಬಿ.ಸುಬಾನ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
